ಪತ್ರಿಕಾ ಪ್ರಕರಣೆ
ದಿನಾಂಕ: 22-05-2018
ಜೂಜಾಡುತ್ತಿದ್ದ ಇಬ್ಬರ ಬಂಧನ, ಬಂಧಿತರಿಂದ
ಸುಮಾರು 21,150/- ನಗದು,
3 ಕಾರು ಮತ್ತು 2 ಬೈಕ್ಗಳ ವಶ:
ದಿನಾಂಕ: 21-05-2018 ರಂದು ಮಧ್ಯಾಹ್ನ 3-30 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಸಾಲಗಾಮೆ ಹೋಬಳಿ, ಶಂಖ
ಗ್ರಾಮದಲ್ಲಿರುವ ಶ್ರೀ ಅವಸರದಮ್ಮ ದೇವಸ್ಥಾನದ ಹತ್ತಿರ ಜೂಜಾಡುತ್ತಿದ್ದಾರೆಂದು ಶ್ರೀ ಬಿ.ಆರ್.
ಗೌಡ, ಪಿಎಸ್ಐ
ಹಾಸನ ಗ್ರಾಮಾಂತರ ಠಾಣೆ. ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ
ಹೋಗಿ ಜೂಜಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ಶ್ರೀ ಬಾಬು ಬಿನ್ ಕಾಳಯಯ, 30
ವರ್ಷ, ಚಾಲಕ, ಎಸ್ಬಿಎಂ ಕಾಲೋನಿ ಎದುರು ಬಿ, ಕಾಟೀಹಳ್ಳಿ ಹಾಸನ 2) ಶ್ರೀ ಉದಯ ಬಿನ್ ಲೇಟ್ ಪರಮೇಶ್, 37 ವಷ, ಚಾಲಕ, ಆರ್ಯಭಟ್ಟ
ರಸ್ತೆ, ಜಯನಗರ, ಹಾಸನ. ಎಂದು ತಿಳಿಸಿದ್ದವರನ್ನು ದಸ್ತಗಿರಿ ಮಾಡಿಕೊಂಡು ಜೂಜಾಟದಲ್ಲಿ
ಪಣಕ್ಕಿಟ್ಟಿದ್ದ ಸುಮಾರು 21,150/-ನಗದು, 3 ಕಾರು ಮತ್ತು 3
ಬೈಕ್ಗಳನ್ನು ಅಮಾನತ್ತುಪಡಿಸಿಕೊಂಡು ಹಾಸನ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ
ಕೈಗೊಂಡಿರುತ್ತೆ.
ಯಾವುದೋ ವಾಹನ ಡಿಕ್ಕಿ, ಅಪರಿಚಿತ ವ್ಯಕ್ತಿಯ ಶವ ಪತ್ತೆ : ದಿನಾಂಕ: 21-05-2018 ರಂದು ಬೆಳಗಿನಜಾವ 2-45 ಗಂಟೆ ಸಮಯದಲ್ಲಿ ಶ್ರೀ ನಾರಾಯಣಗೌಡ, ಎಎಸ್ಐ, ಹಾಸನ
ನಗರ ಠಾಣೆ,. ರವರು
ಹಾಸನದ ಬೇಲೂರು ರಸ್ತೆ, ವಿಜಯನಗರ
ಆದಾಯ ತೆರಿಗೆ ಕಛೇರಿಗೆ ಬಳಿ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದಾಗ ವಿಜಯನಗರದ ಪೆಟ್ರೋಲ್ ಬಂಕ್
ಅಪಘಾತವಾಗಿದೆಂದು ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ
ಸುಮಾರು 65
ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಗೆ ಯಾವುದೋ ವಾಹನ ಡಿಕ್ಕಿ ಮಾಡಿ ತೀವ್ರ ಸ್ವರೂಪದ
ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿದ್ದು, ಕೈಯಲ್ಲಿ
ಲಕ್ಕಮ್ಮ ಎಂದು ಅಚ್ಚೆ ಇರುತ್ತೆ. ನಂತರ ಹಾಸನ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಬಂದು
ವೈದ್ಯರಲ್ಲಿ ತಪಾಸಣೆ ನಡೆಸಲಾಗಿ ಮೃತಪಟ್ಟಿರುತ್ತಾರೆಂದು ತಿಳಿಸಿದ ಮೇರೆಗೆ ಹಾಸನ ಸಂಚಾರಿ
ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ. ಈ ವ್ಯಕ್ತಿಯ ಪತ್ತೆಗಾಗಿ 08172-268630 ಕ್ಕೆ ಸಂಪರ್ಕಿಸುವುದು.
ಮನುಷ್ಯ ಕಾಣೆ : ದಿನಾಂಕ: 14-05-2018 ರಂದು ಬೆಳಿಗಿನ ಜಾವ 4-00 ಗಂಟೆ ಸಮಯದಲ್ಲಿ ಅರಸೀಕೆರೆ
ತಾಲ್ಲೂಕು, ಕಣಕಟ್ಟೆ ಹೋಬಳಿ, ಹರಳಿಕಟ್ಟೆ ಗ್ರಾಮದ ವಾಸಿ ಶ್ರೀ ಹೆಚ್.ಕೆ. ಸಿದ್ದಪ್ಪ, ರವರು ಬುದ್ಧಿ ಭ್ರಮಣೆಯಾಗಿದ್ದು, ಮನೆಯಿಂದ ಹೊರಗೆ ಹೋದವರು ಇದುವರೆವಿಗೂ ವಾಪಸ್ ಮನೆಗೆ ಬಾರದೆ
ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶ್ರೀ ಹೆಚ್.ಕೆ. ಸಿದ್ದಪ್ಪ, ರವರ ಮಗ ಶ್ರೀ ವಸಂತ್ಕುಮಾರ್, ರವರು ಕೊಟ್ಟ ದೂರಿನ ಮೇರೆಗೆ ಅರಸೀಕೆರೆ ಗ್ರಾಮಾಂತರ ಪೊಲೀಸ್
ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ವ್ಯಕ್ತಿಯ ಚಹರೆ: ಶ್ರೀ ಹೆಚ್.ಕೆ. ಸಿದ್ದಪ್ಪ, 65 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಮನೆಯಿಂದ ಹೋಗುವಾಗ ಬಿಳಿ ಶರ್ಟ್ ಮತ್ತು ಪಂಚೆ ಧರಿಸಿರುತ್ತಾರೆ, ಈ ವ್ಯಕ್ತಿಯ ಸುಳಿವು ಸಿಕ್ಕಲ್ಲಿ 08174-232237 ಕ್ಕೆ ಸಂಪರ್ಕಿಸುವುದು.
No comments:
Post a Comment