ಪತ್ರಿಕಾ ಪ್ರಕಟಣೆ ದಿನಾಂಕ: 09-02-2018.
ಬೈಕ್ ಡಿಕ್ಕಿ ಪಾದಾಚಾರಿ ಸಾವು
ದಿನಾಂಕ: 08-02-2018 ರಂದು ಬೆಳಿಗ್ಗೆ 10-00 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಮೂಲ ದುದ್ದ ಗ್ರಾಮದ ಸೊಂಬೇಗೌಡ ರವರು ಹಾಸನ ಕಾಟೀಹಳ್ಳಿ ಎಸ್.ಬಿ.ಎಂ. ಕಾಲೋನಿಯಲ್ಲಿ ತನ್ನ ಮಗ ಹೊಸದಾಗಿ ಕಟ್ಟುತ್ತಿರುವ ಮನೆಯ ಹತ್ತಿರ ಹೋಗಲು ಹಾಸನ-ಅರಸೀಕೆರೆ
ರಸ್ತೆಯ ಗೋಕುಲ್ ಕಾನ್ವೆಂಟ್ ಮುಂಭಾಗ ರಸ್ತೆಯ ಎಡಭಾಗದಲ್ಲಿ ನಡೆದುಕೊಂಡು
ಹೋಗುತ್ತಿದ್ದಾಗ ಹಿಂದಿನಿಂದ ಬಂದ ಕೆಎ-01-ಇಡಬ್ಲ್ಯೂ-4258 ರ ಬೈಕಿನ ಸವಾರ ತನ್ನ
ಬೈಕ್ನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಮಾಡಿದ ಪರಿಣಾಮ ತೀವ್ರ ಸ್ವರೂಪದ
ರಕ್ತಗಾಯಗಳಾಗಿ ಚಿಕಿತ್ಸೆಗಾಗಿ ಹಾಸನ ಸಕರ್ಾರಿ ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸೊಂಬೇಗೌಡ ಬಿನ್ ಲೇಟ್ ಲಕ್ಷ್ಮೇಗೌಡ, 70 ವರ್ಷ ರವರು ಮೃತಪಟ್ಟಿರುತ್ತಾರೆಂದು ಮೃತರ ಮಗ ಶ್ರೀ ಲಕ್ಷ್ಮೇಗೌಡ ರವರು ಕೊಟ್ಟ ದೂರಿನ
ಮೇರೆಗೆ ಹಾಸನ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.
ಹೆಂಗಸು ಕಾಣೆ
ದಿನಾಂಕ: 05-02-2018 ರಂದು ಬೆಳಿಗ್ಗೆ 10-30 ಗಂಟೆ ಸಮಯದಲ್ಲಿ ಹೊಳೆನರಸೀಪುರ ತಾಲ್ಲೂಕ್
ಹಳೇಕೋಟೆ ಹೋಬಳಿ, ಮಳಲಿ ಗ್ರಾಮದ ವಾಸಿ ಶ್ರೀ ಬಾಬು ರವರ ಮಗಳು
ಶ್ರೀಮತಿ ಪವಿತ್ರ ರವರು ಶಾಂತಿಗ್ರಾಮಕ್ಕೆ ಹೋಗಿ ಬರುತೇನೆಂದು ಹೇಳಿ ಹೋದವರು ವಾಪಸ್ ಮನೆಗೆ ಬರದೆ
ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು
ಶ್ರೀಮತಿ ಪವಿತ್ರರವರ ತಾಯಿ ಶ್ರೀಮತಿ ಪಾರ್ವತಿ,ರವರು ಕೊಟ್ಟ ದೂರಿನ ಮೇರೆಗೆ ಹೊಳೆನರಸೀಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹೆಂಗಸಿನ ಚಹರೆ:
ಶ್ರೀಮತಿ ಪವಿತ್ರ ಕೋಂ ಮಂಜುನಾಥ, 33 ವರ್ಷ,
4'5
ಅಡಿ ಎತ್ತರ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು, ಕನ್ನಡ ಬಾಷೆ ಮಾತನಾಡುತ್ತಾರೆ. ಮನೆಯಿಂದ
ಹೋಗುವಾಗ ಕೆಂಪು ಮತ್ತು ಬಿಳಿ ಬಣ್ಣದ ಚೂಡಿದಾರ್ ಧರಿಸಿರುತ್ತಾರೆ. ಈ ಹೆಂಗಸಿನ ಸುಳಿವು
ಸಿಕ್ಕಲ್ಲಿ 08175-73333 ಕ್ಕೆ ಸಂಪರ್ಕಿಸುವುದು.
No comments:
Post a Comment