ಪತ್ರಿಕಾ
ಪ್ರಕಟಣೆ ದಿನಾಂಕ: 27-01-2018.
ಬೈಕ್ನ ನಿಯಂತ್ರಣ
ತಪ್ಪಿ, ವಿದ್ಯುತ್ ಲೈಟ್ ಕಂಬಕ್ಕೆ ಡಿಕ್ಕಿ, ಇಬ್ಬರ ಸಾವು:
ದಿನಾಂಕ: 26-01-2018 ರಂದು
ರಾತ್ರಿ 1-30 ಗಂಟೆ ಸಮಯದಲ್ಲಿ ಚಿಕ್ಕಮಗಳೂರು ಜಿಲ್ಲೆ, ಕಡೂರು
ತಾಲ್ಲೂಕು, ಯಗಟಿ ಹೋಬಳಿ, ಎಳ್ಳಂಬಳ್ಸೆ
ಗ್ರಾಮದ ವಾಸಿ ಶ್ರೀ ನಾಗರಾಜು ರವರು ಸ್ನೇಹಿತರಾದ
ಶ್ರೀ ಚಂದ್ರಶೇಖರ್, ರವರ ಬಾಬ್ತು ಕೆಎ-13 ವಿ-6738 ರ
ಬೈಕ್ನಲ್ಲಿ ಕೆಲಸ ನಿಮಿತ್ತ ಆಲೂರಿಗೆ ಹೋಗಲು ಆಲೂರು ತಾಲ್ಲೂಕು, ಕಸಬಾ ಹೋಬಳಿ, ಭರತವಳ್ಳಿ
ಕ್ರಾಸ್, ಎನ್ಹೆಚ್-75, ಬಿ,ಎಂ.
ರಸ್ತೆಯಲ್ಲಿ ಹೋಗುತ್ತಿದ್ದಾಗ ಬೈಕ್ನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ವಿದ್ಯುತ್
ಲೈಟ್ ಕಂಬಕ್ಕೆ ಡಿಕ್ಕಿ ಮಾಡಿದ ಪರಿಣಾಮ ಶ್ರೀ ನಾಗರಾಜು ಬಿನ್ ಮಹೇಶಪ್ಪ, 33 ವರ್ಷ, ಎಳ್ಳಂಬಳ್ಸೆ
ಗ್ರಾಮ, ಕಡೂರು ತಾಲ್ಲೂಕು, ಚಿಕ್ಕಮಗಳೂರು
ಜಿಲ್ಲೆ ಮತ್ತು ಶ್ರೀ ಚಂದ್ರಶೇಖರ್ ಬಿನ್ ತಮ್ಮಣ್ಣಯ್ಯ, 32 ವರ್ಷ, ಕೋರೆಹಳ್ಳಿ
ಗ್ರಾಮ, ಕಸಬಾ ಹೋಬಳಿ, ಹಾಸನ
ತಾಲ್ಲೂಕು ರವರುಗಳಿಗೆ ತೀವ್ರ ಸ್ವರೂಪದ ರಕ್ತಗಾಯಳಗಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆಂದು ಮೃತ
ಶ್ರೀ ನಾಗರಾಜು, ರವರ ಪತ್ನಿ ಶ್ರೀಮತಿ ಛಾಯ, ರವರು ಕೊಟ್ಟ
ದೂರಿನ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಅಪರಿಚಿತ ವಾಹನ
ಬೈಕಿಗೆ ಡಿಕ್ಕಿ, ಹಳೆಬೀಡು ಠಾಣೆಯ ಪೊಲೀಸ್ ಕಾನ್ಸ್ಟೇಬಲ್ ಸಾವು
ದಿನಾಂಕ: 26-01-2018 ರಂದು
ರಾತ್ರಿ 10-30 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ಜಾವಗಲ್
ಹೋಬಳಿ, ಅರಕೆರೆ ಗ್ರಾಮದ ವಾಸಿ ಹಾಗೂ ಹಳೇಬೀಡು ಠಾಣೆಯಲ್ಲಿ
ಕರ್ತವ್ಯ ನಿರ್ವಹಿಸುತ್ತಿರುವ ಸಿಪಿಸಿ-278 ನಾಗರಾಜು
ಎ.ಟಿ. ರವರು ಹಳೇಬೀಡು ಠಾಣೆಯಲ್ಲಿ ರಾತ್ರಿ
ಕರ್ತವ್ಯದಲ್ಲಿದ್ದು, ಮಾಯಗೋಡನಹಳ್ಳಿ ಗೇಟ್ ಹತ್ತಿರ ಗಲಾಟೆ ಸ್ಥಳಕ್ಕೆ ಹೋಗಿ
ವಾಪಸ್ ಠಾಣೆಗೆ ಹೋಗಲು ಹಳೇಬೀಡು-ಜಾವಗಲ್ ರಸ್ತೆಯಲ್ಲಿ ಹಳೇಬೀಡು ಹತ್ತಿರದ ಯು.ಕೆ. ಡಾಬಾದ
ಹತ್ತಿರ ತಮ್ಮ ಬಾಬ್ತು ಕೆಎ-13-ಇಎ-9183 ರ
ಬೈಕಿನಲ್ಲಿ ಹೋಗುತ್ತಿದ್ದಾಗ ಯಾವುದೋ ಅಪರಿಚಿತ ವಾಹನದ ಚಾಲಕ ತನ್ನ ವಾಹನವನ್ನು
ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಮಾಡಿದ ಪರಿಣಾಮ ತೀವ್ರ ಸ್ವರೂಪದ
ರಕ್ತಗಾಯಗಳಾಗಿ ನಾಗರಾಜು ಎ.ಟಿ. ಬಿನ್
ತೀರ್ಥಕುಮಾರ್, 30 ವರ್ಷ, ಸಿಪಿಸಿ-278, ಹಳೇಬೀಡು
ಪೊಲೀಸ್ ಠಾಣೆ ರವರು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆಂದು ಮೃತರ ತಂದೆ ಶ್ರೀ ತೀರ್ಥಕುಮಾರ್
ರವರು ಕೊಟ್ಟ ದೂರಿನ ಮೇರೆಗೆ ಹಳೇಬೀಡು ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.
ಗಂಡಸು ಕಾಣೆ
ದಿನಾಂಕ: 25-01-2018 ರಂದು
ಮಧ್ಯಾಹ್ನ 4-30 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಕಸಬಾ ಹೋಬಳಿ, ಹೊಳೆನರಸೀಪುರ
ರಸ್ತೆ, ಚನ್ನಪಟ್ಟಣದ ಬ್ರಾಹ್ಮಣರ ವಠಾರದ ವಾಸಿ ಶ್ರೀ
ವೇಲಾಯುಧನ್, ರವರು ಮನೆಯಿಂದ ಹೊರಗೆ ಹೋದವರು ಇದುವರೆವಿಗೂ ವಾಪಸ್
ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು
ಶ್ರೀ ವೇಲಾಯುಧನ್, ರವರ ಪತ್ನಿ ಶ್ರೀಮತಿ ಸರಸ್ವತಿ, ರವರು ಕೊಟ್ಟ
ದೂರಿನ ಮೇರೆಗೆ ಹಾಸನ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ವ್ಯಕ್ತಿಯ
ಚಹರೆ: ಶ್ರೀ ವೇಲಾಯುಧನ್, 52 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು
ಬಣ್ಣ, ಸಾಧಾರಣ ಮೈಕಟ್ಟು, ಮನೆಯಿಂದ
ಹೋಗುವಾಗ ಬಿಳಿ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿರುತ್ತಾರೆ. ಈ ವ್ಯಕ್ತಿಯ ಸುಳಿವು
ಸಿಕ್ಕಲ್ಲಿ ಹಾಸನ ಬಡಾವಣೆ ಠಾಣೆ ಫೋನ್ ನಂ. 08172-268967 ಕ್ಕೆ ಸಂಪರ್ಕಿಸುವುದು.
No comments:
Post a Comment