ಪತ್ರಿಕಾ ಪ್ರಕಟಣೆ ದಿನಾಂಕ: 15-01-2018
ಲಾರಿ ಬೈಕಿಗೆ
ಡಿಕ್ಕಿ ಬೈಕ್ ಸವಾರನ ಸಾವು : ದಿನಾಂಕ: 14-01-2018 ರಂದು ಸಂಜೆ 07-45 ಗಂಟೆ
ಸಮಯದಲ್ಲಿ ಬೆಂಗಳೂರು ನಗರ ಪ್ಯಾಲೇಸ್ ರಸ್ತೆ,
ಬಿಎಂಸಿ ಹಾಸ್ಟೇಲ್ ವಾಸಿ ಸಾಗರ್ ಹೊಗಾಡೆ ರವರ ಬಾಬ್ತು
ಕೆಎ-03-ಜೆಕೆ-4073 ಬಜಾಜ್ ಡಾಮಿನೋ ಬೈಕಿನಲ್ಲಿ ಬೆಂಗಳೂರಿನಿಂದ ಅರಸೀಕೆರೆಗೆ ಸ್ನೇಹಿತರ ಮನೆಗೆ
ಹಬ್ಬಕ್ಕೆ ಹೋಗಲು ಚನ್ನರಾಯಪಟ್ಟಣ ತಾಲ್ಲೂಕು ಶೆಟ್ಟಿಹಳ್ಳಿ ಬೈಪಾಸ್ ಎನ್ಹೆಚ್-75, ಬಿ.ಎಂ. ರಸ್ತೆಯಲ್ಲಿ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಕೆಎ-13-ಬಿ-378 ರ ಲಾರಿ ಚಾಲಕ ತನ್ನ ವಾಹನವನ್ನು
ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಮಾಡಿದ ಪರಿಣಾಮ ಬೈಕ್ ಸಮೇತ ರಸ್ತೆಗೆ ಬಿದ್ದು,
ತೀವ್ರ ಸ್ವರೂಪದ ರಕ್ತಗಾಯಗಳಾಗಿ ಚಿಕಿತ್ಸೆಗಾಗಿ
ಚನ್ನರಾಯಪಟ್ಟಣ ಸಕರ್ಾರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ
ಬೆಳ್ಳೂರು ಕ್ರಾಸ್, ಎ.ಸಿ.ಗಿರಿ ಆಸ್ಪತ್ರೆಗೆ ಕರೆದುಕೊಂಡು
ಹೋಗುತ್ತಿದ್ದಾಗ ಮಾರ್ಗಮದ್ಯೆ ಸಾಗರ್ ಹೂಗಾಡೆ ಬಿನ್ ಮಲ್ಲಪ್ಪ, 22 ವರ್ಷ, ಸ್ವಂತ ಊರು, ವಿದ್ಯಾನಗರ, ಬೀದರ್ ಜಿಲ್ಲೆ ಹಾಲಿ ವಿಳಾಸ ಬಿಎಂಸಿ ಹಾಸ್ಟೇಲ್, ಪ್ಯಾಲೇಸ್ ರಸ್ತೆ, ಬೆಂಗಳೂರು ನಗರ
ರವರು ಮೃತಪಟ್ಟಿರುತ್ತಾರೆಂದು ಮೃತರ ಅಣ್ಣ ಶ್ರೀ ಶ್ರೀಕಾಂತ್ ರವರು ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ
ಕ್ರಮ ಕೈಗೊಂಡಿರುತ್ತದೆ.
ಗ್ಯಾಸ್ ಟ್ಯಾಂಕರ್
ಲಾರಿ ಬೈಕಿಗೆ ಡಿಕ್ಕಿ ಬೈಕ್ ಸವಾರನ ಸಾವು : ದಿನಾಂಕ: 14-01-2017 ರಂದು ಸಂಜೆ 05-30 ಗಂಟೆ ಸಮಯದಲ್ಲಿ
ರಾಮನಗರ ಜಿಲ್ಲೆ, ಕನಕಪುರ ತಾಲ್ಲೂಕು, ಮರಳವಾಡಿ ಹೋಬಳಿ, ಸಿದ್ದಗೌಡನದೊಡ್ಡಿ
ಗ್ರಾಮದ ಬಸವರಾಜು ರವರ ಬಾಬ್ತು ಕೆಎ-05-ಹೆಚ್ಕೆ-6896 ರ ಬೈಕ್ನಲ್ಲಿ ಹಾಸನ ತಾಲ್ಲೂಕು, ದುದ್ದ ಹೋಬಳಿ, ಚಿಕ್ಕಕಡಲೂರು ಗ್ರಾಮಕ್ಕೆ ಸಂಬಂಧಿಕರ ಮನೆಗೆ
ಹೋಗಲು ಹಾಸನದ ಬಿ.ಕಾಟೀಹಳ್ಳಿ ಗ್ರಾಮದ ಹತ್ತಿರವಿರುವ ಸ್ಪೀಡ್ಬಾರ್ ಮುಂಭಾಗ ಹಾಸನ-ಅರಸೀಕೆರೆ
ರಸ್ತೆಯಲ್ಲಿ ಹೋಗುತ್ತಿದ್ದಾಗ ಅರಸೀಕೆರೆ ಕಡೆಯಿಂದ ಬಂದ ಟಿನ್-30-ಎಕೆ-7499 ರ ಗ್ಯಾಸ್ ಟ್ಯಾಂಕರ್ ಲಾರಿ ಚಾಲಕ ತನ್ನ
ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಮಾಡಿದ ಪರಿಣಾಮ ಬೈಕ್ ಸಮೇತ ರಸ್ತೆಯ
ಮೇಲೆ ಬಿದ್ದು, ಟ್ಯಾಂಕರ್ ಲಾರಿಯ ಚಕ್ರಕ್ಕೆ ಸಿಕ್ಕಿಕೊಂಡು
ಬಸವರಾಜು ಬಿನ್ ಭೈರೇಗೌಡ, 27 ವರ್ಷ ರವರು ಮೃತಪಟ್ಟಿರುತ್ತಾರೆಂದು ಮೃತರ
ತಂದೆ ಶ್ರೀ ಭೈರೇಗೌಡ ರವರು ಕೊಟ್ಟ ದೂರಿನ ಮೇರೆಗೆ ಹಾಸನ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ
ಕ್ರಮ ಕೈಗೊಂಡಿರುತ್ತದೆ.
No comments:
Post a Comment