ಪತ್ರಿಕಾ ಪ್ರಕಟಣೆ ದಿನಾಂಕ: 06-10-2017
ಹಾಸನ ನಗರದ ಎರಡು ಕಡೆ
ಜೂಜಾಡುತ್ತಿದ್ದ 15 ಜನರ ಬಂಧನ, ಬಂಧಿತರಿಂದ 23,235/- ನಗದು
ವಶ :
ದಿನಾಂಕ: 05-10-2017 ರಂದು ಸಂಜೆ 05-45 ಗಂಟೆ ಸಮಯದಲ್ಲಿ ಹಾಸನ ನಗರದ ದೇವಿಗೆರೆ
ಕಲ್ಯಾಣಿ ಹತ್ತಿರ ಮತ್ತು ಸಂತೇಪೇಟೆ, ಗೊರೂರು ರಸ್ತೆಯ ಫಿಲ್ಟರ್ ಹೌಸ್ ಹತ್ತಿರ
ಕಾಂಪೌಂಡ್ ಬಳಿ ಜನರು ಅಂದರ್-ಬಾಹರ್ ಇಸ್ಪೀಟ್
ಜೂಜಾಟ ಆಡುತ್ತಿದ್ದಾರೆಂದು ಪಿಎಸ್ಐ ಶ್ರೀ ಸುರೇಶ್ ಹಾಸನ ನಗರ ಠಾಣೆ ರವರಿಗೆ ಬಂದ ಖಚಿತ ಮಾಹಿತಿ
ಮೇರೆಗೆ ಸಿಬ್ಬಂದಿಗಳೊಂದಿಗೆ ದೇವಿಗೆರೆ ಕಲ್ಯಾಣಿ ಹತ್ತಿರ ಹೋಗಿ ಜೂಜಾಡುತ್ತಿದ್ದವರನ್ನು ಹಿಡಿದು
ಹೆಸರು ವಿಳಾಸ ಕೇಳಲಾಗಿ 1) ಸಮೀವುಲ್ಲಾ ಬಿನ್ ಜಬ್ಬರ್ ಸಾಬ್, 30 ವರ್ಷ, ವಿಶ್ವನಾಥನಗರ, ಹಾಸನ 2) ಅಲೀಂ ಪಾಷ ಬಿನ್ ಅಬ್ದುಲ್ ಅನೀಫ್,
32 ವರ್ಷ, ಸ್ಲಂ ಬೋಡರ್್,
ವಿಶ್ವನಾಥನಗರ, ಹಾಸನ 3) ಮನೋಜ್ ಬಿನ್ ಅನ್ಬುಕುಮಾರ್, 19 ವರ್ಷ, ಸ್ಲಂಬೋಡರ್್, ವಿಶ್ವನಾಥನಗರ, ಹಾಸನ 4) ಬಾಷಾ ಬಿನ್ ಬುಡೇನ್ ಸಾಬ್, 36 ವರ್ಷ, ಸ್ಲಂಬೋಡರ್್, ವಿಶ್ವನಾಥನಗರ, ಹಾಸನ 5) ಬಾಬುಜಾನ್ ಬಿನ್ ಇಕ್ಬಾಲ್ ಅಹಮದ್, 27 ವರ್ಷ, ಸ್ಲಂಬೋಡರ್್, ವಿಶ್ವನಾಥನಗರ, ಹಾಸನ 6) ಅನ್ಸರ್ ಪಾಷ ಬಿನ್ ಮುಕ್ತಾರ್, ಸ್ಲಂಬೋಡರ್್,
ವಿಶ್ವನಾಥನಗರ, ಹಾಸನ 7) ಅಬ್ದುಲ್ ರಜಾಕ್ ಬಿನ್ ಕೆ.ಎಂ. ಇಬ್ರಾಹಿಂ,
31 ವರ್ಷ, ಚಿಕ್ಕಬಸದಿ ರಸ್ತೆ,
ಹಾಸನ ಎಂದು ತಿಳಿಸಿದವರನ್ನು ದಸ್ತಗಿರಿ ಮಾಡಿಕೊಂಡು
ಜೂಜಾಟದಲ್ಲಿ ಪಣಕ್ಕಿಟ್ಟಿದ್ದ 2235/-ನಗದನ್ನು ಅಮಾನತ್ತುಪಡಿಸಿಕೊಂಡು, ನಂತರ ಸಂತೇಪೇಟೆ, ಗೊರೂರು ರಸ್ತೆಯ ಫಿಲ್ಟರ್ ಹೌಸ್ ಹತ್ತಿರ ಕಾಂಪೌಂಡ್ ಬಳಿ ಹೋಗಿ
ಜೂಜಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ಪುಟ್ಟರಾಜು ಬಿನ್ ಸತ್ಯನಾರಾಯಣ, 31 ವರ್ಷ, ಬಿಟ್ಟಗೋಡನಹಳ್ಳಿ, ಹಾಸನ 2) ಸಲೀಂ ಬಿನ್ ನೂರ್ ಅಹಮದ್, 30 ವರ್ಷ, ಚಿಪ್ಪಿನಕಟ್ಟೆ, ಹಾಸನ 3) ಪ್ರತಾಪ ಬಿನ್ ಸ್ವಾಮಿ, 22 ವರ್ಷ, ವಲ್ಲಭಾಯಿ ರಸ್ತೆ, ಹಾಸನ 4) ಕೇಶವ ಬಿನ್ ಅಣ್ಣಯ್ಯ, 41 ವರ್ಷ, ಬಿ.ಕಾಟೀಹಳ್ಳಿ, ಸತ್ಯಮಂಗಲ ಹಾಸನ 5) ನಿಂಗರಾಜು ಬಿನ್ ಸಿದ್ದನಾಯ್ಕ, ವಿಜಯನಗರ ಬಡಾವಣೆ, ಹಾಸನ 6) ತಜಾಮುಲ್ ಬಿನ್ ಶೇಖ್ಮುಕ್ತಿಯಾರ್,
24 ವರ್ಷ,
ಅಂಬೇಡ್ಕರ್ ನಗರ, ಹಾಸನ 7) ಅಶೋಕ ಬಿನ್ ಶಿವಣ್ಣ, 24 ವರ್ಷ, ಅಂಬೇಡ್ಕರ್ ನಗರ, ಹಾಸನ 8) ಸೋಮಶೇಖರ ಬಿನ್ ರಂಗೇಗೌಡ, 41 ವರ್ಷ, ಸರಸ್ವತಿಪುರಂ, ಹಾಸನ ಎಂದು ತಿಳಿಸಿದವನನ್ನು
ದಸ್ತಗಿರಿ ಮಾಡಿಕೊಂಡು ಜೂಜಾಟದಲ್ಲಿ ಪಣಕ್ಕಿಟ್ಟದ್ದ 21,000/- ನಗದನ್ನು ಅಮಾನತ್ತುಪಡಿಸಿಕೊಂಡು ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ
ಕೈಗೊಂಡಿರುತ್ತದೆ.
ಟಿಪ್ಪರ್ ಲಾರಿ ಬೈಕಿಗೆ ಡಿಕ್ಕಿ
ಬೈಕ್ ಸವಾರನ ಸಾವು
ದಿನಾಂಕ: 05-10-2017 ರಂದು ಸಂಜೆ 05-15 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ
ತಾಲ್ಲೂಕು, ನುಗ್ಗೇಹಳ್ಳಿ ಹೋಬಳಿ, ತೆಂಕನಹಳ್ಳಿ ಗ್ರಾಮದ ಕೃಷ್ಣ
ಟಿ.ಪಿ ರವರು ಕೆಎ-13-ಇಜೆ-2886 ರ ಪಲ್ಸರ್ ಬೈಕಿನಲ್ಲಿ ಸಂಬಂಧಿಕರ ಮನೆಗೆ
ಹೋಗಲು ಹಾಸನ ತಾಲ್ಲೂಕು, ಶಾಂತಿಗ್ರಾಮ ಹೋಬಳಿ, ಕಾರೆಕೆರೆ ಗೇಟ್, ಎನ್ಹೆಚ್-75, ಬಿ.ಎಂ. ರಸ್ತೆಯಲ್ಲಿ
ಹೋಗುತ್ತಿದ್ದಾಗ ಹಿಂದಿನಿಂದ ಬಂದ ಕೆಎ-13-ಎ-9704 ರ ಟಿಪ್ಪರ್ ಲಾರಿ ಚಾಲಕ ತನ್ನ ವಾಹನವನ್ನು
ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಹೋಗಿ ಡಿಕ್ಕಿ ಮಾಡಿದ ಪರಿಣಾಮ ಬೈಕ್ ಸಮೇತ ರಸ್ತೆಗೆ ಬಿದ್ದು,
ತೀವ್ರ ಸ್ವರೂಪದ ರಕ್ತಗಾಯಗಳಾಗಿ ಕೃಷ್ಣ ಟಿ.ಪಿ ಬಿನ್
ಪುಟ್ಟಾಚಾರ್, 24 ವರ್ಷ ರವರು ಸ್ಥಳದಲ್ಲಿಯೇ
ಮೃತಪಟ್ಟಿರುತ್ತಾರೆಂದು ಮೃತರ ತಾಯಿ ಶ್ರೀಮತಿ ಸುನಂದಮ್ಮ ರವರು ಕೊಟ್ಟ ದೂರಿನ ಮೇರೆಗೆ
ಶಾಂತಿಗ್ರಾಮ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.
ಹುಡುಗ ಕಾಣೆ
ದಿನಾಂಕ: 10-09-2017 ರಂದು ಬೆಳಿಗ್ಗೆ 06-00 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ
ತಾಲ್ಲೂಕು, ಎಸ್. ಬೆಳಗೊಳ ಗ್ರಾಮದ ಅರುವನಹಳ್ಳಿ ಗ್ರಾಮದ
ವಿನಯ್ ರವರು ಕೆಲಸಕ್ಕೆ ಹೋಗುವುದಾಗಿ ಮನೆಯಿಂದ ಹೋದವರು ವಾಪಸ್ ಮನೆಗೆ ಬಾರದೆ
ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು
ವಿನಯ್ ರವರ ತಂದೆ ಜಯಕುಮಾರ್ ರವರು ದಿನಾಂಕ: 05-10-2017 ರಂದು ಕೊಟ್ಟ ದೂರಿನ ಮೇರೆಗೆ ಶ್ರವಣಬೆಳಗೊಳ ಠಾಣೆಯಲ್ಲಿ ಪ್ರಕರಣ
ದಾಖಲಿಸಿರುತ್ತದೆ. ಕಾಣೆಯಾದ ಹುಡುಗನ ಚಹರೆ: ವಿನಯ್ ಎ.ಜೆ. ಬಿನ್ ಜಯಕುಮಾರ್, 25 ವರ್ಷ, 5'6'' ಅಡಿ ಎತ್ತರ, ಕನ್ನಡ ಭಾಷೆ ಮಾತನಾಡುತ್ತಾನೆ. ಕಾಣೆಯಾದ ಹುಡುಗನ ಬಗ್ಗೆ ಸುಳಿವು ಸಿಕ್ಕಲ್ಲಿ
ಶ್ರವಣಬೆಳಗೊಳ ಠಾಣೆ ಫೋನ್ ನಂ.08176-257229 ಕ್ಕೆ ಸಂಪರ್ಕಿಸುವುದು.
No comments:
Post a Comment