* * * * * * HASSAN DISTRICT POLICE

Monday, May 21, 2018

PRESS NOTE : 20-05-2018


ಪತ್ರಿಕಾ ಪ್ರಕರಣೆ        ದಿನಾಂಕ: 20-05-2018.

ಅಪರಿಚಿತ ಕಾರು ಟಿವಿಎಸ್ ಎಕ್ಸ್ಎಲ್ ಬೈಕಿಗೆ ಡಿಕ್ಕಿ ಬೈಕಿನಲ್ಲಿದ್ದ ಒಬ್ಬರ ಸಾವು ಇಬ್ಬರಿಗೆ ಗಾಯ :            ದಿನಾಂಕ: 19-05-2018 ರಂದು ಬೆಳಗಿನ ಜಾವ 02-30 ಗಂಟೆ ಸಮಯದಲ್ಲಿ ಹೊಳೆನರಸೀಪುರ ತಾಲ್ಲೂಕು, ಕಸಬಾ ಹೋಬಳಿ, ಚಿಗಹಳ್ಳಿ ಗ್ರಾಮದ ಶಿವಪ್ಪ ರವರ ಬಾಬ್ತು ಕೆಎ-13-ಇಎಲ್-6225 ರ ಟಿವಿಎಸ್ ಎಕ್ಸ್ಎಲ್ ಸ್ಕೂಟರ್ನಲ್ಲಿ ಸುರೇಶ ಮತ್ತು ಮಹದೇವ ರವರನ್ನು ಕೂರಿಸಿಕೊಂಡು ಮರಿಶೆಟ್ಟಿಹಳ್ಳಿಯಿಂದ ಊರಿಗೆ ಹೋಗಲು ಅಂತನಹಳ್ಳಿ ಗೇಟ್ ಹತ್ತಿರ ಎನ್ಹೆಚ್-75 ರಸ್ತೆಯಲ್ಲಿ ಹೋಗುತ್ತಿದ್ದಾಗ ಹಿಂದೆ ಬೆಂಗಳೂರು ಕಡೆಯಿಂದ ಬಂದ ಯಾವುದೋ ಕಾರಿನ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಮಾಡಿದ ಪರಿಣಾಮ ಬೈಕ್ ಸಮೇತ ರಸ್ತೆಗೆ ಬಿದ್ದು, ತೀವ್ರ ಸ್ವರೂಪದ ರಕ್ತಗಾಯಗಳಾಗಿ ಶಿವಪ್ಪ, 50 ವರ್ಷ ರವರು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಉಳಿದ ಇಬ್ಬರಿಗೆ ಮೈಕೈಗೆ ಪೆಟ್ಟುಬಿದ್ದಿರುತ್ತದೆಂದು ಮೃತರ ಮಗ ಶ್ರೀ ಪಾಲಾಕ್ಷ ರವರು ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.

ಟಿಪ್ಪರ್ ಲಾರಿ ಡಿಕ್ಕಿ ಪಾದಾಚಾರಿ ಹುಡುಗ ಸಾವು : ದಿನಾಂಕ: 19-05-2018 ರಂದು ಸಂಜೆ 06-30 ಗಂಟೆ ಸಮಯದಲ್ಲಿ ಅರಕಲಗೂಡು ತಾಲ್ಲೂಕು, ಕೊಣನೂರು ಹೋಬಳಿ, ಮಜ್ಜನಹಳ್ಳಿ ಗ್ರಾಮದ ಗೋವಿಂದ ರವರು ತರಿಗಳಲೆ ಗ್ರಾಮದ ಅಪ್ಪಾಜಿಗೌಡರ ಮನೆಗೆ ಕೆಲಸಕ್ಕೆಂದು ಹೋಗಿ ಕೆಲಸ ಮುಗಿಸಿಕೊಂಡು ವಾಪಸ್ ಊರಿಗೆ ಹೋಗಲು ತರಿಗಳಲೆ ಗ್ರಾಮದ ಕರಿಗೌಡರ ಮನೆಯ ಮುಂದೆ ಹೋಗುತ್ತಿದ್ದಾಗ ಕೆಎ-28-6494 ರ ಟಿಪ್ಪರ್ ಲಾರಿ ಚಾಲಕ ತನ್ನ ವಾಹನವನ್ನು  ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಮಾಡಿದ ಪರಿಣಾಮ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಆನಂದ ಬಿನ್ ಅಪ್ಪಾಜಿಗೌಡ, 16 ವರ್ಷ ರವರು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆಂದು ಮೃತರ ತಂದೆ ಶ್ರೀ ವೆಂಕಟೇಶ ರವರು ಕೊಟ್ಟ ದೂರಿನ ಮೇರೆಗೆ ಕೊಣನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.

ಗಂಡಸು ಕಾಣೆ : ದಿನಾಂಕ: 19-05-2018 ರಂದು ಬೆಳಿಗ್ಗೆ 09-45 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ದಂಡಿಗನಹಳ್ಳಿ ಹೋಬಳಿ, ದೊಡ್ಡಮತ್ತಿಘಟ್ಟ ಗ್ರಾಮದ ರಂಗಶೆಟ್ಟಿ @ ರಂಗನಾಥ್ ರವರು ಸ್ನೇಹಿತ ಮಂಜೇಗೌಡ ರವರೊಂದಿಗೆ ಚನ್ನರಾಯಪಟ್ಟಣಕ್ಕೆ ಹೋಗಿ ಸ್ನೇಹಿತ ಮಂಜೇಗೌಡರನ್ನು ಬೈಕ್ ಹತ್ತಿರ ನಿಲ್ಲಿಸಿ  ಐಡಿಯಲ್ ಬೇಕರಿಗೆ ಹೋಗಿ ಬ್ರೇಡ್ ಮತ್ತು ಬಿಸ್ಕೇಟ್ ತೆಗೆದುಕೊಂಡು ಬರುವುದಾಗಿ ಹೋದವರು ವಾಪಸ್ ಬರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ರಂಗಶೆಟ್ಟಿ ರವರ ಪತ್ನಿ ಶ್ರೀಮತಿ ಐಶ್ವರ್ಯ ರವರು ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ವ್ಯಕ್ತಿಯ ಚಹರೆ: ರಂಗಶೆಟ್ಟಿ @ ರಂಗನಾಥ್, 35 ವರ್ಷ, 5'7'' ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಬಿಳಿ ಬಣ್ಣದ ಶಟರ್್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ. ಕಾಣೆಯಾದ ವ್ಯಕ್ತಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಚನ್ನರಾಯಪಟ್ಟಣ ನಗರ ಠಾಣೆ ಫೋನ್ ನಂ. 08176-252333 ಕ್ಕೆ ಸಂಪರ್ಕಿಸುವುದು.

ಗಂಡಸು ಕಾಣೆ : ದಿನಾಂಕ: 13-05-2018 ರಂದು ಸಂಜೆ 04-30 ಗಂಟೆ ಸಮಯದಲ್ಲಿ ಹಾಸನ ನಗರ ಸ್ಲಂಬೋಡರ್್ ವಾಸಿ ನಾಗೇಶ ರವರು ಬೆಂಗಳೂರಿಗೆ ಹೋಗಿ ಬರುವುದಾಗಿ ಮನೆಯಿಂದ ಹೋದವರು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ನಾಗೇಶ ರವರ ಪತ್ನಿ ಶ್ರೀಮತಿ ಸರಿತ ರವರು ದಿನಾಂಕ: 19-05-2018 ರಂದು ಕೊಟ್ಟ ದೂರಿನ ಮೇರೆಗೆ ಪೆನ್ಷನ್ ಮೊಹಲ್ಲಾ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ವ್ಯಕ್ತಿಯ ಚಹರೆ: ನಾಗೇಶ, 36 ವರ್ಷ, 5'6'' ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾದಾರಣ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾರೆ. ಕಾಣೆಯಾದ ವ್ಯಕ್ತಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಪೆನ್ಷನ್ ಮೊಹಲ್ಲಾ ಠಾಣೆ  ಫೋನ್ ನಂ. 08172-272260 ಕ್ಕೆ ಸಂಪರ್ಕಿಸುವುದು

No comments: