ಪತ್ರಿಕಾ ಪ್ರಕಟಣೆ ದಿನಾಂಕ:
15-05-2018
ಕಾರು ಡಿಕ್ಕಿ, ಪಾದಚಾರಿ ಸಾವು, ಒಬ್ಬರಿಗೆ ಗಾಯ : ದಿನಾಂಕ: 13-05-2018 ರಂದು ರಾತ್ರಿ 8-00 ಗಂಟೆ ಸಮಯದಲ್ಲಿ ಆಲೂರು ತಾಲ್ಲೂಕು,
ಪಾಳ್ಯ ಹೋಬಳಿ, ನಲ್ಲೂರು ಗ್ರಾಮದ ವಾಸಿಗಳಾದ ಶ್ರೀ ಅಣ್ಣೇಗೌಡ ಮತ್ತು ಶ್ರೀಮತಿ ಈರಮ್ಮ, ರವರುಗಳು ಮನೆಯ ಮುಂದೆ ನಡೆದುಕೊಂಡು ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಕೆಎ-105,ಎಇ-4690ರ ಕಾರಿನ ಚಾಲಕ ತನ್ನ ವಾಹನವನ್ನು
ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಶ್ರೀ
ಅಣ್ಣೇಗೌಡ ಮತ್ತು ಶ್ರೀಮತಿ ಈರಮ್ಮ, ರವರುಗಳಿಗೆ ಡಿಕ್ಕಿ ಮಾಡಿದ ಪರಿಣಾಮ ಶ್ರೀಮತಿ
ಈರಮ್ಮ, ರವರಿಗೆ ಸಣ್ಣ-ಪುಟ್ಟ ರಕ್ತಗಾಯಳಾಗಿದ್ದು, ಶ್ರೀ ಅಣ್ಣೇಗೌಡ, ರವರು ಕಾರಿನ ಚಕ್ರದ ಅಡಿ ಸಿಲುಕಿ ತೀವ್ರ
ಸ್ವರೂಪದ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು
ಹೋಗುತ್ತಿದ್ದಾಗ ಶ್ರೀ ಅಣ್ಣೇಗೌಡ ಬಿನ್
ಕಪ್ಪೇಗೌಡ, 68 ವರ್ಷ, ನಲ್ಲೂರು ಗ್ರಾಮ, ಪಾಳ್ಯ ಹೋಬಳಿ, ಆಲೂರು ತಾಲ್ಲೂಕು, ರವರು ಮಾರ್ಗ ಮಧ್ಯೆ ಮೃತಪಟ್ಟಿರುತ್ತಾರೆಂದು
ಮೃತ ಮಗ ಶ್ರೀ ಎನ್.ಎ. ವಿನಿಲ್, ರವರು ಕೊಟ್ಟ ದೂರಿನ ಮೇರೆಗೆ ಆಲೂರು
ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
No comments:
Post a Comment