ಪತ್ರಿಕಾ ಪ್ರಕಟಣೆ ದಿನಾಂಕ: 17-04-2018.
ಕಾರು ಬೈಕ್ಗೆ ಡಿಕ್ಕಿ, ಬೈಕ್ ಸಾವರನ ಸಾವು.
: ದಿನಾಂಕ: 15-04-2018 ರಂದು ಸಂಜೆ 4-30 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ದುದ್ದ ಹೋಬಳಿ, ಲಿಂಗರಸನಹಳ್ಳಿ ಗ್ರಾಮದ ವಾಸಿ ಶ್ರೀ ಎಲ್.ಡಿ.
ಲಕ್ಷ್ಮೀನಾರಾಯಣ, ರವರ ಬಾಬ್ತು ಕೆಎ-13, ಯುಇ-1945 ರ ಡಿಸ್ಕವರಿ ಬೈಕ್ನಲ್ಲಿ ಪುರದಮ್ಮ, ದೇವನಸ್ಥಾನಕ್ಕೆ
ಹೋಗಿ ಪೂಜೆ ಮುಗಿಸಿಕೊಂಡು ವಾಪಸ್ ಹಾಸನ ತಾಲ್ಲೂಕು, ಸಾಲಗಾಮೆ
ಹೋಬಳಿ, ಗದ್ದೆಕೆಂಪಮ್ಮ ಊಟದ ಹಾಲ್ ಮುಂಬಾಗದಲ್ಲಿ
ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಕೆಎ-18-5434 ರ ಕಾರಿನ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು
ಬೈಕ್ಗೆ ಡಿಕ್ಕಿ ಮಾಡಿದ ಪರಿಣಾಮ ಶ್ರೀ ಎಲ್.ಡಿ. ಲಕ್ಷ್ಮೀನಾರಾಯಣ ಬಿನ್ ದೇವೇಗೌಡ, 60
ವರ್ಷ, ಲಿಂಗರಸಹಳ್ಳಿ ಗ್ರಾಮ, ದುದ್ದ ಹೋಬಳಿ, ಹಾಸನ ತಾಲ್ಲೂಕು, ರವರಿಗೆ ತೀವ್ರ ಸ್ವರೂಪ ರಕ್ತಗಾಯಗಳಾಗಿ
ಸ್ಥಳದಲ್ಲೇ ಮೃತಪಟ್ಟಿರುತ್ತಾರೆಂದು ಮೃತರ ಸೊಸೆ ಶ್ರೀಮತಿ ಮೇಘನ, ರವರು ದಿನಾಂಕ: 16-04-2018 ರಂದು ಕೊಟ್ಟ ದೂರಿನ ಮೇರೆಗೆ ಹಾಸನ
ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ತಾಯಿ ಮಗುವಿನೊಂದಿಗೆ ಕಾಣೆ.
:ದಿನಾಂಕ: 23-03-2018 ರಂದು ಮಧ್ಯಾಹ್ನ 12-00
ಗಂಟೆ ಸಮಯದಲ್ಲಿ ಅರಕಲಗೂಡು ತಾಲ್ಲೂಕು, ಮಲ್ಲಿಪಟ್ಟಣ
ದಾಖ್ಲೆ ಹೋಬಳಿ ಸುಣ್ಣದಕೊಪ್ಪಲು ಗ್ರಾಮದ ವಾಸಿ ಶ್ರೀ ದೇವರಾಜ, ರವರ ಪತ್ನಿ ಶ್ರೀಮತಿ ನಂದಿನಿ, ರವರು ಮತ್ತು ಮಗಳು ಕು|| ಸಿರಿಯೊಂದಿಗೆ ತವರು ಮನೆ ಪಿರಿಯಾಪಟ್ಟಣ
ತಾಲ್ಲೂಕು, ಚಾಮರಾಯನ ಕೋಟೆ ಗ್ರಾಮಕ್ಕೆ ಹೋಗುತ್ತೇನೆಂದು
ಮನೆಯಲ್ಲಿ ಹೇಳಿ ಹೋದವರು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ
ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು
ಶ್ರೀಮತಿ ನಂದಿನಿಯ ಪತಿ ಶ್ರೀ ದೇವರಾಜ, ರವರು
ದಿನಾಂಕ: 16-04-2018 ರಂದು ಕೊಟ್ಟ ದೂರಿನ ಮೇರೆಗೆ ಅರಕಲಗೂಡು
ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹೆಂಗಸು ಮತ್ತು ಮಗುವಿನ ಚಹರೆ:
ಶ್ರೀಮತಿ ನಂದಿನಿ ಕೋಂ ದೇವರಾಜ,
28 ವರ್ಷ, 4 ಳಿ ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ದುಂಡುಮುಖ, ಕನ್ನಡ ಭಾಷೆ ಮಾತನಾಡುತ್ತಾಳೆ. ಮನೆಯಿಂದ
ಹೋಗುವಾಗ ಹಳದಿ ಬಣ್ಣದ ಟೌಪ್ ಮತ್ತು ಹಳದಿ ಬಣ್ಣದ ಪ್ಯಾಂಟ್, ಧರಿಸಿರುತ್ತಾರೆ. ಕು|| ಸಿರಿ
ಬಿನ್ ದೇವರಾಜ, 4 ವರ್ಷ, ಬಿಳಿ ಮೈಬಣ್ಣ,
ದುಂಡು ಮುಖ, ಬಿಳಿ ಟಾಪು ಬಿಳಿ ಫ್ಯಾಂಟ್ ಧರಿಸಿರುತ್ತಾರೆ.
ಹುಡುಗ ಕಾಣೆ
: ದಿನಾಂಕ: 04-04-2018 ರಂದು ಬೆಳಗಿನ ಜಾವ 4-00 ಗಂಟೆ ಸಮಯದಲ್ಲಿ ಹಾಸನದ ಕಾಟೀಹಳ್ಳಿ
ಶ್ರೀರಾಮನಗರ, ಆರ್ಟಿಓ ಆಫೀಸ್ ಹತ್ತಿರ ವಾಸಿ ಶ್ರೀ ರಾಮೇಗೌಡ, ರವರ ಮಗ ಶ್ರೀ ಸಂತೋಷ್, ರವರು ಬೆಂಗಳೂರಿಗೆ ಹೋಗುವುದಾಗಿ ಮನೆಯಲ್ಲಿ
ಹೇಳಿ ಹೋದವರು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ
ಪತ್ತೆಯಾಗಿರುವುದಿಲ್ಲ ಪತ್ತೆಮಾಡಿಕೊಡಬೇಕೆಂದು ಶ್ರೀ ಸಂತೋಷ್ನ ತಾಯಿ ಶ್ರೀ ದೇವಿರಮ್ಮ, ರವರು ಕೊಟ್ಟ ದೂರಿನ ಮೇರೆಗೆ ಹಾಸನ ಬಡಾವಣೆ
ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹುಡುಗನ ಚಹರೆ: ಶ್ರೀ ಸಂತೋಷ್ ಬಿನ್ ರಾಮೇಗೌಡ, 22 ವರ್ಷ, 5 ಅಡಿ ಎತ್ತರ,
ಸಾಧಾರಣಾ ಮೈಕಟ್ಟು, ಮನೆಯಿಂದ ಹೋಗವಾಗ ಬಿಳಿ ಶರ್ಟ್ ಮತ್ತು
ಜೀನ್ಸ್ ಪ್ಯಾಂಟ್ ಧರಿಸಿರುತ್ತಾರೆ. ಈ ವ್ಯಕ್ತಿಯ ಸುಳಿವು ಸಿಕ್ಕಲ್ಲಿ 08172-268967 ಕ್ಕೆ ಸಂಪರ್ಕಿಸುವುದು.
No comments:
Post a Comment