ಪತ್ರಿಕಾ ಪ್ರಕಟಣೆ ದಿನಾಂಕ: 14-04-2018.
ಜೂಜಾಡುತ್ತಿದ್ದ ಆರು ಜನರ ಬಂಧನ, ಬಂಧತರಿಂದ ಸುಮಾರು 20,400/- ನಗದು ವಶ:
ದಿನಾಂಕ: 13-04-2018 ರಂದು ಮಧ್ಯಾಹ್ನ 3-30 ಗಂಟೆ ಸಮಯದಲ್ಲಿ ಶ್ರೀ
ವಿಜಯಕೃಷ್ಣ, ಪಿಎಸ್ಐ, ಹಳೇಬೀಡು ಪೊಲೀಸ್ ಠಾಣೆ, ರವರು ಸಿಬ್ಬಂದಿಗಳೊಂದಿಗೆ ಹಳೇಬೀಡು ಟೌನ್ನಲ್ಲಿ ರೌಂಡ್ಸ್ ಕರ್ತವ್ಯ ನಿರ್ವಹಿಸುತ್ತಿದ್ದಾಗ
ಹಳೇಬೀಡು ಠಾಣಾ ವ್ಯಾಪ್ತಿಯ ಹಿರೇಹಳ್ಳಿ ಗ್ರಾಮದ ಸಾರ್ವಜನಿಕರ ರಸ್ತೆಯಲ್ಲಿ ಅಂದರ್-ಬಾಹರ್
ಜೂಜಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ಮಲ್ಲೇಗೌಡ ಬಿನ್ ಕಾಳೇಗೌಡ, 38 ವರ್ಷ, ಜಾವಗಲ್ ಗ್ರಾಮ, ಅರಸೀಕೆರೆ ತಾಲ್ಲೂಕು 2) ಧರಣೇಶ್ ಬಿನ್ ಚಂದ್ರಪ್ಪ, 30 ವರ್ಷ, ಮೊಸಳೆ ಜಾವಗಲ್ ಗ್ರಾಮ, ಅರಸೀಕೆರೆ ತಾಲ್ಲೂಕು 3) ದಿವಾಕರ ಬಿನ್ ಬಸವರಾಜು, 26 ವರ್ಷ, ಜಾವಗಲ್ ಗ್ರಾಮ, ಅರಸೀಕೆರೆ ತಾಲ್ಲೂಕು, 4) ಗಿರೀಶ್ ಬಿನ್ ಚಿಕ್ಕಣ್ಣ, 35 ವರ್ಷ, ಜಾವಗಲ್ ಗ್ರಾಮ, ಅರಸೀಕೆರೆ ತಾಲ್ಲೂಕು 5) ಹರೀಶ್ ಬಿನ್ ರಾಜಣ್ಣ, 25 ವರ್ಷ, ಬೆಂಡೆಕೆರೆ ಗ್ರಾಮ, ಅರಸೀಕೆರೆ ತಾಲ್ಲೂಕು 6) ರಂಗನಾಥ ಬಿನ್ ದಾಸಪ್ಪ, 35 ವರ್ಷ, ಬಾಣಾವರ ಗ್ರಾಮ, ಅರಸೀಕೆರೆ ತಾಲ್ಲೂಕು ಎಂದು ತಿಳಿಸಿದ್ದವರನ್ನು ದಸ್ತಗಿರಿ ಮಾಡಿಕೊಂಡು ಜೂಜಾಟದಲ್ಲಿ
ಪಣಕ್ಕಿಟ್ಟಿದ್ದ ಸುಮಾರು 20,400/- ನಗದನ್ನು ಅಮಾನತ್ತುಪಡಿಸಿಕೊಂಡು ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ
ಕೈಗೊಂಡಿರುತ್ತೆ.
ಹುಡುಗ ಕಾಣೆ : ದಿನಾಂಕ: 11-04-2014 ರಂದು ರಾತ್ರಿ 10-00 ಗಂಟೆ ಸಮಯದಲ್ಲಿ ಹಾಸನದ ವಲ್ಲಬಾಯಿ ರಸ್ತೆ,
3ನೇ ಕ್ರಾಸ್, ವಾಸಿ ಶ್ರೀ ಶ್ರೀನಿವಾಸ, ರವರ ಮಗ ಶ್ರೀ ಹರ್ಷ, ಮನೆಯಿಂದ ಸ್ನೇಹಿತನ
ಮನೆಯಲ್ಲಿ ಮಲಗಲು ಹೋಗುವುದಾಗಿ ಹೇಳಿ ಹೋದವದನು ಇದುವರೆವಿಗೂ ವಾಪಸ್ ಮನೆಗೆ ಬಾರದೆ
ಕಾಣೆಯಾಗಿರುತ್ತಾನೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆ ಮಾಡಿಕೊಡಬೇಕೆಂದು ಶ್ರೀ ಹರ್ಷನ ತಂದೆ ಶ್ರೀ
ಶ್ರೀನಿವಾಸ, ರವರು ಕೊಟ್ಟ ದೂರಿನ
ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹುಡುಗನ ಚಹರೆ:
ಶ್ರೀ ಹರ್ಷ ಬಿನ್ ಶ್ರೀನಿವಾಸ, 30 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಮನೆಯಿಂದ ಹೋಗುವಾಗ ಬಿಳಿ ಶಟರ್್ ಮತ್ತು ಕಪ್ಪು ಫ್ಯಾಂಟ್ ಧರಿಸಿರುತ್ತಾರೆ. ಈ ಹುಡುಗನ
ಸುಳಿವು ಸಿಕ್ಕಲ್ಲಿ 08172- 272260 ಕ್ಕೆ ಸಂಪಕರ್ಿಸುವುದು.
No comments:
Post a Comment