* * * * * * HASSAN DISTRICT POLICE

Friday, April 13, 2018

PRESS NOTE : 13-04-2018


ಪತ್ರಿಕಾ ಪ್ರಕಟಣೆ             ದಿನಾಂಕ: 13-04-2018

ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವನ ಬಂಧನ, ಬಂಧಿತನಿಂದ ಸುಮಾರು 1,400/- ಬೆಲೆಯ ಮದ್ಯ ವಶ:       ದಿನಾಂಕ: 12-04-2018 ರಂದು ಸಂಜೆ 5-00 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ಗಂಡಸಿ ಹೋಬಳಿ, ಕೊಂಡೆನಾಳು ಗೇಟ್  ಗ್ರಾಮದ ವಾಸಿ ಶ್ರೀ ಲಕ್ಷ್ಮೀಶ್, ರವರ ಬಾಬ್ತು ಮನೆಯ ಜಗುಲಿಯ ಮೇಲೆ ಮದ್ಯ ಮಾರಾಟ ಮಾಡುತ್ತಿದ್ದಾರೆಂದು  ಬಂದ ಮಾಹಿತಿ ಮೇರೆಗೆ ಶ್ರೀ ಶಬ್ಬೀರ್ ಹುಸೇನ್ ಪಿಎಸ್ಐ, ಗಂಡಸಿ ಪೊಲೀಸ್ ಠಾಣೆ, ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಮದ್ಯ ಮಾರಾಟ ಮಾಡುತ್ತಿದ್ದವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ  ಶ್ರೀ ಲಕ್ಷ್ಮೀಶ ಬಿನ್  ಕೊಂಡೆನಾಳು ಗ್ರಾಮ  ಗಂಡಸಿ ಹೋಬಳಿ, ಅರಸೀಕೆರೆ ತಾಲ್ಲೂಕು ಎಂದು ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು ಮಾರಾಟಕ್ಕಿಟ್ಟಿದ್ದ ಸುಮಾರು 1,400/-ಬೆಲೆಯ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಗಂಡಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.

ಸುಗಮ ಟೂರಿಸ್ಟ್ ಬಸ್ಸ್, ಡಿವೈಡರ್ಗೆ ಡಿಕ್ಕಿ ಇಬ್ಬರ ಸಾವು, ಉಳಿದವರಿಗೆ ಸಣ್ಣ-ಪುಟ್ಟ ಗಾಯ: ದಿನಾಂಕ: 12-04-2018 ರಂದು ರಾತ್ರಿ 8-45 ಗಂಟೆ ಸಮಯದಲ್ಲಿ ಉಡುಪಿ ಜಿಲ್ಲೆ, ನವೋದಯ 4ನೇ ಕ್ರಾಸ್ ವಾಸಿ ಶ್ರೀ ಶಿಶಿರಾ, ರವರು ಮತ್ತು ಉಡುಪಿ ಜಿಲ್ಲೆ, ಕುಂದಾಪುರ ತಾಲ್ಲೂಕು, ಬ್ರಹ್ಮವರ ಗ್ರಾಮದ ವಾಸಿ ಶ್ರೀ ಮಹೇಶ್, ರವರುಗಳು ಬೆಂಗಳೂರಿಗೆ ಹೋಗಲು ಕುಂದಾಪುರದಿಂದ ಕೆಎ-51/ಡಿ-1897 ರ ಸುಗಮ ಟೂರಿಸ್ಟ್ ಬಸ್ಸಿನಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಹಿರೀಸಾವೆ ಹೋಬಳಿ, ಬ್ಯಾಡರಹಳ್ಳಿ ಗೇಟ್ ಹತ್ತಿರ ಎನ್ಹೆಚ್-75 ಬಿ.ಎಂ. ರಸ್ತೆಯಲ್ಲಿ ಹೋಗುತ್ತಿದ್ದಾಗ ರಸ್ತೆಯ ಬಲಬದಿಯ ಡಿವೈಡರ್ ಕಟ್ಟೆಗೆ ಡಿಕ್ಕಿಯಾದ ಪರಿಣಾಮ ಬಸ್ಸಿನಲ್ಲಿದ್ದ ಶ್ರೀ ಶಿಶಿರ, ರವರು ಬಸ್ಸಿನ ಕಿಟಿಕಿ ಗಾಜಿನಿಂದ ಹೊರಬಿದ್ದು, ಬಸ್ಸಿನ ಅಡಿ ಸಿಲುಕಿದ ಪರಿಣಾಮ ಶ್ರೀ ಶಿಶಿರ ಬಿನ್ ಪ್ರಶಾಂತ್, 45 ವರ್ಷ, ನವೋದಯ, 4ನೇ ಕ್ರಾಸ್, ಉಡುಪಿ ಜಿಲ್ಲೆ,  ಮತ್ತು ಶ್ರೀ ಮಹೇಶ್ ಬಿನ್ ಬಸವ ಪೂಜಾರಿ, ಬ್ರಹ್ಮವರ ಗ್ರಾಮ, ಕುಂದಾಪುರ ತಾಲ್ಲೂಕು, ಉಡುಪಿ ಜಿಲ್ಲೆ, ರವರುಗಳಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆ. ಬಸ್ಸಿನಲ್ಲಿ ಸುಮಾರು 23 ಜನರು ಪ್ರಯಾಣಿಸುತ್ತಿದ್ದು, ಸಣ್ಣ-ಪುಟ್ಟ ರಕ್ತಗಾಯಗಳಾಗಿರುತ್ತದೆಂದು  ಮೃತ ಶ್ರೀ ಶಿಶಿರ, ತಂದೆ ಶ್ರೀ ಪ್ರಶಾಂತ್ ಕುಮಾರ್, ರವರು ಕೊಟ್ಟ ದೂರಿನ ಮೇರೆಗೆ ಹಿರೀಸಾವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಹುಡುಗಿ ಕಾಣೆ : ದಿನಾಂಕ: 11-04-2018 ರಂದು ರಾತ್ರಿ 08-00 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು,  ದಂಡಿಗನಹಳ್ಳಿ ಹೋಬಳಿ,  ಎ. ಕಾಳೆನಹಳ್ಳಿ ಗ್ರಾಮದ ವಾಸಿ ಶ್ರೀ ಮಂಜುನಾಥ್, ರವರು ಅಕ್ಕನ ಮಗಳಾದ ಕು|| ವೀಣಾಳನ್ನು ತಮ್ಮ ಮನೆಯಲ್ಲಿಕೊಂಡಿದ್ದು, ಅಂತಿಮ ಬಿ.ಎ. ವ್ಯಾಸಂಗ ಮಾಡಿಕೊಂಡಿದ್ದು, ಎಂದಿನಂತೆ ಚನ್ನರಾಯಪಟ್ಟಣದ ಆದಿಚುಂಚನಗಿರಿ ಕಾಲೇಜಿಗೆ  ಹೋಗಿ ಬರುತ್ತೇನೆಂದು ಮನೆಯಲ್ಲಿ ಹೇಳಿ ಹೋದವಳು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಕು|| ವೀಣಾ ಮಾವ ಶ್ರೀ ಮಂಜುನಾಥ್, ರವರು ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಕು|| ವೀಣಾ ಬಿನ್ ಸುರೇಶ್, 19 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣ ಮೈಕಟ್ಟು, ಮನೆಯಿಂದ ಹೋಗುವಾಗ ಹಸಿರು ಬಣ್ಣದ ಚೂಡಿಧಾರ ಧರಿಸಿರುತ್ತಾಳೆ. ಈ ಹುಡುಗಿಯ ಸುಳಿವು ಸಿಕ್ಕಲ್ಲಿ 08176-254933 ಕ್ಕೆ ಸಂಪಕರ್ಿಸುವುದು.

No comments: