ಪತ್ರಿಕಾ ಪ್ರಕಟಣೆ ದಿನಾಂಕ:13-02-2018
ಹುಡುಗಿ ಕಾಣೆ
ಸಕಲೇಶಪುರ ತಾಲ್ಲೂಕ್ ಗಂಧದ ಹೊಳೆ ಗ್ರಾಮದ ವಾಸಿ ಚಂದು ರವರ ಮಗಳು ಚಾಂದನಿ ರವರು ತನ್ನ
ತಂಗಿಯನ್ನು ನೋಡಲು ದಿನಾಂಕ :10-2-2018 ರಂದು
ಬೆಳಗ್ಗೆ 11.00 ಗಂಟೆಗೆ
ಬ್ಯಾಕರವಳ್ಳಿ ಮುರಾರ್ಜಿ ಶಾಲೆಗೆ ಹೋಗಿದ್ದು, ಆದರೆ
ಚಾಂದನಿ ಬ್ಯಾಕರವಳ್ಳಿ ಮುರಾರ್ಜಿ ಶಾಲೆಗೆ ಹೋಗದೆ ವಾಪಸ್ಸು ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಿದರೂ
ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ಚಾಂದನಿ ರವರ ತಂದೆ ಚಂದು ರವರು ದಿ :12-2-2018 ರಂದು ಕೊಟ್ಟ ದೂರಿನ ಮೇರೆಗೆ ಸಕಲೇಶಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ.
ಕಾಣೆಯಾದ ಹುಡುಗಿ ಚಹರೆ : ಚಾಂದಿನಿ ಬಿನ್ ಚಂದು, 19ವರ್ಷ, 5.3 ಅಡಿ ಎತ್ತರ, ಬಿಳಿ
ಬಣ್ಣ, ಸಾಧಾರಣ ಮೈಕಟ್ಟು, ಕೋಲುಮುಖ, ಕನ್ನಡ
ಬಾಷೆ ಮಾತನಾಡುತ್ತಾಳೆ. ಮನೆಯಿಂದ ಹೋಗುವಾಗ ನೀಲಿ ಮತ್ತು ಬಿಳಿ ಬಣ್ಣದ ಚೂಡಿದಾರ್ ಧರಿಸಿರುತ್ತಾಳೆ. ಕಾಣೆಯಾದ ಹುಡುಗಿ
ಪತ್ತೆಯಾದಲ್ಲಿ ಸಕಲೇಶಪುರ ನಗರ ಪೊಲೀಸ್ ಠಾಣೆ
ಫೋನ್ ನಂ. 08173-244100 ಕ್ಕೆ
ಸಂಪರ್ಕಿಸುವುದು.
ಹುಡುಗಿ ಕಾಣೆ
ಹಾಸನ ತಾಲ್ಲೂಕ್ ಕಟ್ಟಾಯ ಹೋಬಳಿ ಅಮ್ಮಗೋಡನಹಳ್ಳಿಗ್ರಾಮದ ವಾಸಿ ನಾಗರಾಜಶೆಟ್ಟಿ ರವರ ಮಗಳು
ಭವ್ಯಳನ್ನು ದೊಡ್ಡಬಳ್ಳಾಪುರದ ದರ್ಗಾಜಿಹಳ್ಳಿಯ ಹೇಮಂತಕುಮಾರ ರವರಿಗೆ ಕೊಟ್ಟು ಮದುವೆ
ಮಾಡಿಕೊಟ್ಟಿದ್ದು, ಭವ್ಯಳಿಗೆ
ಆರೋಗ್ಯ ಸರಿಯಿಲ್ಲದ ಕಾರಣ ಅಮ್ಮಗೋಡನಹಳ್ಳಿಗೆ ಕರೆದುಕೊಂಡು ಬಂದು ಇಟ್ಟುಕೊಂಡಿದ್ದು, ದಿನಾಂಕ :01-12-2018 ರಂದು
ಭವ್ಯಳು ಆರೋಗ್ಯ ಸರಿಯಿಲ್ಲದ ಕಾರಣ ಹಾಸನದ ಸರ್ಕಾರಿ ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ
ಹೋದವರು ವಾಪಸ್ಸು ಮನೆಗೆ ಬಾರದೆ
ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ
ಮಾಡಿಕೊಡಬೇಕೆಂದು ಭವ್ಯಳ ತಂದೆ ನಾಗರಾಜಶೆಟ್ಟಿ ರವರು ದಿ :12-2-2018 ರಂದು
ಕೊಟ್ಟ ದೂರಿನ ಮೇರೆಗೆ ಗೊರೂರು ಠಾಣೆಯಲ್ಲಿ
ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಹುಡುಗಿ ಚಹರೆ : ಭವ್ಯ ಬಿನ್ ನಾಗರಾಜಶೆಟ್ಟಿ, 18ವರ್ಷ, 5.2 ಅಡಿ
ಎತ್ತರ, ಬಿಳಿ ಬಣ್ಣ, ಸಾಧಾರಣ
ಮೈಕಟ್ಟು, ದುಂಡುಮುಖ, ಕನ್ನಡ ಬಾಷೆ ಮಾತನಾಡುತ್ತಾಳೆ. ಮನೆಯಿಂದ
ಹೋಗುವಾಗ ಹಸಿರು ಬಣ್ಣದ ಚೂಡಿದಾರ್
ಧರಿಸಿರುತ್ತಾಳೆ. ಕಾಣೆಯಾದ ಹುಡುಗಿ ಪತ್ತೆಯಾದಲ್ಲಿ ಗೊರೂರು ಪೊಲೀಸ್ ಠಾಣೆ ಫೋನ್ ನಂ. 08172-225472 ಕ್ಕೆ ಸಂಪರ್ಕಿಸುವುದು.
ಮನುಷ್ಯ ಕಾಣೆ
ಹಾಸನ ತಾಲ್ಲೂಕ್ ದುದ್ದ ಹೋಬಳಿ ಬಿಟ್ಟಳ್ಳಿಗ್ರಾಮದ ವಾಸಿ ರಂಗಸ್ವಾಮಿ ರವರ ಮಗ ಅಶೋಕ ಮಂದ
ಬುದ್ದಿಯವನಾಗಿದ್ದು, ಆಗಾಗ್ಗೆ
ಎಲ್ಲಿಗಾದರೂ ಹೋಗಿ 15-20
ದಿವಸಗಳ ನಂತರ ಬರುತ್ತಿದ್ದ, ಈಗ್ಗೆ
ಸುಮಾರು 03 ತಿಂಗಳ ಹಿಂದೆ ಅಂದರೆ
ದಿನಾಂಕ :02-11-2017 ರಂದು
ಹಾಸನಕ್ಕೆ ಹೋಗಿ ಬರುತ್ತೇನೆಂದು ಹೇಳಿ ಹೋದವನು
ವಾಪಸ್ಸು ಮನೆಗೆ ಬಾರದೆ
ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ
ಮಾಡಿಕೊಡಬೇಕೆಂದು ಅಶೋಕ ರವರ ತಂದೆ ರಂಗಸ್ವಾಮಿ ರವರು ದಿ :12-2-2018 ರಂದು
ಕೊಟ್ಟ ದೂರಿನ ಮೇರೆಗೆ ದುದ್ದ ಠಾಣೆಯಲ್ಲಿ
ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಮನುಷ್ಯನ ಚಹರೆ ಅಶೋಕ ಬಿನ್ ರಂಗಸ್ವಾಮಿ, 35ವರ್ಷ, 5.4 ಅಡಿ
ಎತ್ತರ, ಕೆಂಪು ಬಣ್ಣ, ಸಾಧಾರಣ
ಮೈಕಟ್ಟು, ಕೋಲುಮುಖ, ಕನ್ನಡ ಬಾಷೆ ಮಾತನಾಡುತ್ತಾರೆ. ಮನೆಯಿಂದ
ಹೋಗುವಾಗ ನೀಲಿ ಬಣ್ಣದ ಶರ್ಟ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ. ಕಾಣೆಯಾದ
ಹುಡುಗಿ ಪತ್ತೆಯಾದಲ್ಲಿ ದುದ್ದ ಪೊಲೀಸ್ ಠಾಣೆ
ಫೋನ್ ನಂ. 08172-223935 ಕ್ಕೆ ಸಂಪರ್ಕಿಸುವುದು.
No comments:
Post a Comment