ಪತ್ರಿಕಾ ಪ್ರಕಟಣೆ ದಿನಾಂಕ: 07-01-2018
ಅಕ್ರಮವಾಗಿ
ಮದ್ಯ ಸಾಗಿಸುತ್ತಿದ್ದವನ ಬಂಧನ, ಬಂಧಿತರಿಂದ 2,960/- ಬೆಲೆಯ
ಮದ್ಯ
ದಿನಾಂಕ: 06-01-2018 ರಂದು ಬೆಳಿಗ್ಗೆ 09-00 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ದುದ್ದ ಡಾಬಾ ಹೋಟೆಲ್ನ ಸಮೀಪ ಮದ್ಯದ ಬಾಟಲಿಗಳನ್ನು
ಚೀಲದಲ್ಲಿ ತೆಗೆದುಕೊಂಡು ಹೋಗುತ್ತಿದ್ದಾರೆಂದು
ಹೆಚ್ಸಿ 113 ಶ್ರಿ ರವಿ ದುದ್ದ ಠಾಣೆ
ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಡಾಬಾದ ಹತ್ತಿರ
ನಡೆದುಕೊಂಡು ಹೋಗುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ
ಕೇಳಲಾಗಿ ರಾಮಚಂದ್ರ ಬಿನ್ ರಂಗಸ್ವಾಮಿ, 24 ವರ್ಷ, ಬಾಗೇಶಪುರ ಗ್ರಾಮ, ಗಂಡಸಿ ಹೋಬಳಿ, ಅರಸೀಕೆರೆ ತಾಲ್ಲೂಕು ಎಂದು
ತಿಳಿಸಿದವರನ್ನು ದಸ್ತಗಿರಿ ಮಾಡಿಕೊಂಡು ಅವರ ವಶದಲ್ಲಿದ್ದ 2960/- ಬೆಲೆಯ ಮದ್ಯವನ್ನು
ಅಮಾನತ್ತುಪಡಿಸಿಕೊಂಡು ದುದ್ದ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.
ಆಟೋದಲ್ಲಿ
ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಇಬ್ಬರ ಬಂಧನ, ಮರಳು
ಸಮೇತ ಆಟೋ ವಶ
ದಿನಾಂಕ: 07-01-2018 ರಂದು ಬೆಳಗಿನ ಜಾವ 05-30 ಗಂಟೆ ಸಮಯದಲ್ಲಿ ಸಕಲೇಶಪುರ ಪಟ್ಟಣ, ಹಳೆಬಸ್ ನಿಲ್ದಾಣದ ಹತ್ತಿರ ಹೆಚ್ಸಿ-196 ಶ್ರೀ ಹೇಮೇಶ್ ಸಕಲೇಶಪುರ
ನಗರ ಠಾಣೆ ರವರು ಗಸ್ತು ಮಾಡುತ್ತಿದ್ದಾಗ ಕುಶಾಲನಗರ ಬಡಾವಣೆ, ಬಿಲಾಲ್ ಮಸೀದಿ ರಸ್ತೆಯಲ್ಲಿ ಆಟೋರಿಕ್ಷಾದಲ್ಲಿ ಮರಳನ್ನು ಅಕ್ರಮವಾಗಿ ತುಂಬಿಕೊಂಡು
ಹೋಗುತ್ತಿದ್ದಾರೆಂದು ಪಿಎಸ್ಐ ರವರಿಗೆ ಬಂದ ಖಚಿತ ಮಾಹಿತಿಯನ್ನು ತಿಳಿಸಿದ ಮೇರೆಗೆ
ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಕೆಎ-46-5320 ರ ಆಟೋದಲ್ಲಿ ಯಾವುದೇ
ಪರವಾನಗಿ ಇಲ್ಲದೆ ಅಕ್ರಮವಾಗಿ ಮರಳು ಚೀಲಗಳನ್ನು ತುಂಬಿಕೊಂಡು ಹೋಗುತ್ತಿದ್ದವರನ್ನು ಹಿಡಿದು
ಹೆಸರು ವಿಳಾಸ ಕೇಳಲಾಗಿ 1)
ಹನೀಸ್ ಬಿನ್
ಅಬ್ದುಲ್ ಸುಬಾನ್,
25 ವರ್ಷ, ಕುಶಾಲನಗರ ಬಡಾವಣೆ, ಸಕಲೇಶಪುರ ಪಟ್ಟಣ 2) ಮಹಮದ್ ಮುದಸೀರ್ ಬಿನ್
ಮಹಮದ್ ಉಮ್ಮರ್, 20 ವರ್ಷ, ಹೌಸಿಂಗ್ ಬೋಡರ್್ ಕುಶಾಲನಗರ
ಬಡಾವಣೆ, ಸಕಲೇಶಪುರ ಪಟ್ಟಣ ಎಂದು
ತಿಳಿಸಿದವರನ್ನು ದಸ್ತಗಿರಿ ಮಾಡಿಕೊಂಡು ಮರಳು ತುಂಬಿದ ಚೀಲಗಳನ್ನು ಆಟೋ ಸಮೇತ ಅಮಾನತ್ತುಪಡಿಸಿಕೊಂಡು ಸಕಲೇಶಪುರ ನಗರ
ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.
No comments:
Post a Comment