* * * * * * HASSAN DISTRICT POLICE

Friday, January 5, 2018

PRESS NOTE : 05-01-2018

ಪತ್ರಿಕಾ ಪ್ರಕಟಣೆ              ದಿನಾಂಕ: 05-01-2018


ಲಾರಿ ಡಿಕ್ಕಿ ಪಾದಾಚಾರಿ ವ್ಯಕ್ತಿ ಸಾವು

    ದಿನಾಂಕ: 04-01-2018 ರಂದು ರಾತ್ರಿ 08-00 ಗಂಟೆ ಸಮಯದಲ್ಲಿ  ಆಲೂರು ತಾಲ್ಲೂಕು, ಪಾಳ್ಯ ಹೋಬಳಿ, ಕಣದಹಳ್ಳಿ ಗ್ರಾಮದ ನಂಜಯ್ಯ ರವರು ಕಣದಹಳ್ಳಿ ಗ್ರಾಮದ ಹತ್ತಿರ ಎನ್.ಹೆಚ್-75, ಬಿ.ಎಂ. ರಸ್ತೆಯನ್ನು ದಾಟುತ್ತಿದ್ದಾಗ ಮಂಗಳೂರು ಕಡೆಯಿಂದ ಬಂದ ಲಾರಿ ಚಾಲಕ ತನ್ನ ಲಾರಿಯನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಮಾಡಿದ ಪರಿಣಾಮ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಚಿಕಿತ್ಸೆಗಾಗಿ ಹಾಸನ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ನಂಜಯ್ಯ, 60 ವರ್ಷ ರವರು ಮೃತಪಟ್ಟಿರುತ್ತಾರೆಂದು ಮೃತರ ಮಗ ಶ್ರೀ ಕುಮಾರ ರವರು ಕೊಟ್ಟ ದೂರಿನ ಮೇರೆಗೆ  ಆಲೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.

ಗಂಡಸು ಕಾಣೆ


    ದಿನಾಂಕ: 31-12-2017 ರಂದು ಮಧ್ಯಾಹ್ನ 01-00 ಗಂಟೆ ಸಮಯದಲ್ಲಿ ಹಾಸನ ನಗರ, ನವಾಯತ್ವಾಡಿ ರಸ್ತೆ ಮೇದರ ಬೀದಿ, ಎಸ್ಎಸ್ ಇಂಜಿನಿಯರಿಂಗ್ ವರ್ಕ್  ಅಕ್ರಂ ಲೇತ್ ಗ್ಯಾರೇಜ್ ವಾಸಿ, ಅಕ್ರಂ ಖಾನ್ ಮನೆಯಿಂದ ಹೋದವರು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ಅಕ್ರಂಖಾನ್ ರವರ ತಮ್ಮ ಶ್ರೀ ಇಮ್ರಾನ್ ರವರು ದಿನಾಂಕ: 04-01-2018 ರಂದು ಕೊಟ್ಟ ದೂರಿನ ಮೇರೆಗೆ ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ವ್ಯಕ್ತಿಯ ಚಹರೆ: ಅಕ್ರಂಖಾನ್ ಬಿನ್ ರಜಾಕ್, 40 ವರ್ಷ, 5'9'' ಅಡಿ ಎತ್ತರ, ಕನ್ನಡ ಮತ್ತು ಉರ್ದು ಭಾಷೆ ಮಾತನಾಡುತ್ತಾರೆ. ಕಾಣೆಯಾದ ವ್ಯಕ್ತಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಹಾಸನ ನಗರ ಠಾಣೆ ಫೋನ್ ನಂ. 08172-268333 ಕ್ಕೆ ಸಂಪರ್ಕಿಸುವುದು

No comments: