ಪತ್ರಿಕಾ ಪ್ರಕಟಣೆ ದಿನಾಂಕ:14-01-2018
ಟ್ರಾಕ್ಟರ್
ಹಿಂಬದಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವು : ದಿನಾಂಕ: 13-01-2018 ರಂದು ಸಂಜೆ 7.45 ಗಂಟೆ ಸಮಯದಲ್ಲಿ ಬೆಂಗಳೂರಿನ ಬನಶಂಕರಿ ವಾಸಿ ರಾಜು ರವರ ಅಣ್ಣನ ಮಗ ಮಂಜುನಾಥ
ಮತ್ತು ಆತನ ಸ್ನೇಹಿತ ಧರ್ಮರಾಜು ರವರು ಧರ್ಮಸ್ಥಳಕ್ಕೆ ಹೋಗಲು ಮಂಜುನಾಥನ ಬಾಬ್ತು ಕೆಎ-51-ವಿ-5943ರ ರಾಯಲ್ ಎನ್ಫೀಲ್ಡ್ ಬುಲೆಟ್ ಬೈಕಿನಲ್ಲಿ
ಬೆಂಗಳೂರಿನಿಂದ ಹೊರಟು ಚನ್ನರಾಯಪಟ್ಟಣ ತಾಲೂಕ್ ಹಿರಿಸಾವೆ ಹೋಬಳಿ, ಬ್ಯಾಡರಹಳ್ಳಿ ಗೇಟ್ ಹತ್ತಿರ ಬೈಕ್ ಅನ್ನು
ಅತಿವೇಗ ಮತ್ತು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಮುಂದೆ ಹೋಗುತ್ತಿದ್ದ ಯಾವುದೋ
ಟ್ರಾಕ್ಟರ್ಗೆ ಡಿಕ್ಕಿ ಮಾಡಿದ ಪರಿಣಾಮ ಇಬ್ಬರಿಗೆ
ರಕ್ತಗಾಯಗಳಾಗಿದ್ದು ಚಿಕಿತ್ಸೆಗೆಂದು ಎ.ಸಿ.ಗಿರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಮಂಜುನಾಥ
ಬಿನ್ ಶಿವಣ್ಣ, 22ವರ್ಷ, ಬನಶಂಕರಿ, ಬೆಂಗಳೂರು ರವರು ಮೃತಪಟ್ಟಿರುತ್ತಾರೆಂದು
ಮೃತರ ಚಿಕ್ಕಪ್ಪ ರಾಜು ರವರು ಕೊಟ್ಟ ದೂರಿನ ಮೇರೆಗೆ ಹಿರಿಸಾವೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ
ತನಿಖೆ ಕ್ರಮ ಕೈಗೊಂಡಿರುತ್ತದೆ.
ಸಿಮೆಂಟ್ ಮೋರಿಗೆ
ಕಾರು ಡಿಕ್ಕಿ ಒಂದು ಸಾವು : ಮೈಸೂರು ಜಿಲ್ಲೆ ಬಿಳಿಕೆರೆ ಗ್ರಾಮದ
ಚಿಕ್ಕಬೀಕನಹಳ್ಳಿ ಹುಂಡಿ ಗ್ರಾಮದ ಶಶಿಕಲಾ ರವರ ಗಂಡ ಶಶಿಗೌಡ ರವರು ಕುಡ್ಲಿಪೇಟೆಯಲ್ಲಿ ಕೆಎಇಬಿ
ಲೈನ್ಮೆನ್ ಆಗಿದ್ದು, ದಿನಾಂಕ: 13-01-2018 ರಂದು ಕೆಇಬಿ ಜೆಇ ಮನುಕುಮಾರ ರವರ ಜೊತೆ ಅವರ ಬಾಬ್ತು ಕೆಎ-04-ಎಂಜಿ-3256 ರ ಕಾರಿನಲ್ಲಿ ಆಲೂರು ತಾಲ್ಲೂಕ್ ಅಬ್ಬನ
ಗ್ರಾಮಕ್ಕೆ ಬಂದಿದ್ದು, ರಾತ್ರಿ 10.00 ಗಂಟೆ ಸಮಯದಲ್ಲಿ ವಾಪಸ್ಸು ಕೊಡ್ಲಿಪೇಟೆಗೆ ಹೋಗಲು ಮನುಕುಮಾರ ರವರು
ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿ,
ಕೆ.ಹೊಸಕೋಟೆ ಪೊಲೀಸ್ ಚೌಕಿ ಸಮೀಪ ರಸ್ತೆಯ ಎಡ ಬದಿಯ
ಸಿಮೆಂಟ್ ಮೋರಿಗೆ ಡಿಕ್ಕಿ ಮಾಡಿದ ಪರಿಣಾಮ ಕಾರು ಜಕಂಗೊಂಡು ಕಾರಿನಲ್ಲಿದ್ದ ಶಶಿಗೌಡ, 36ವರ್ಷ, ಚಿಕ್ಕಬೀಕನಹಳ್ಳಿ ಹುಂಡಿ ಗ್ರಾಮ, ಮೈಸೂರು ಜಿಲ್ಲೆ ರವರು
ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆಂದು ಮೃತರ ಹೆಂಡತಿ ಶಶಿಕಲಾ ರವರು ಕೊಟ್ಟ ದೂರಿನ
ಮೇರೆಗೆ ಆಲೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕ್ರಮ ಕೈಗೊಂಡಿರುತ್ತದೆ.
No comments:
Post a Comment