ಪತ್ರಿಕಾ ಪ್ರಕಟಣೆ
ದಿನಾಂಕ: 03-12-2017
ಹುಡುಗ ಕಾಣೆ
ತಮಿಳುನಾಡು ರಾಜ್ಯ, ವೇದಚಂದೂರು ತಾಲ್ಲೂಕು, ವಂದರಾಯನ್ ಪಟ್ಟಿ ಗ್ರಾಮದ ಕುಮಾರವೇಲು ಚನ್ನರಾಯಪಟ್ಟಣದ ಮಕಾನ್ ಕ್ರಾಸ್ನಲ್ಲಿ
ಮುರುಗನ್ ರವರ ಪಾತ್ರೆ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದು, ದಿನಾಂಕ: 26-11-2017 ರಂದು ಮಧ್ಯಾಹ್ನ 03-00 ಗಂಟೆ ಸಮಯದಲ್ಲಿ ಚಳಿ ಜ್ವರ
ಬಂದು ಊರಿಗೆ ಹೋಗುವುದಾಗಿ ಅಂಗಡಿಯಿಂದ ಹೋದವನು ಊರಿಗೆ ಹೋಗದೆ ವಾಪಸ್ ಅಂಗಡಿಗೂ ಬರದೆ
ಕಾಣೆಯಾಗಿರುತ್ತಾನೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು
ಕುಮಾರವೇಲು ರವರ ತಂದೆ ಶ್ರೀ ರವಿಚಂದ್ರನ್ ವಿ. ರವರು ದಿನಾಂಕ: 02-12-2017 ರಂದು ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಪ್ರಕರಣ ದ8ಾಖಲಿಸಿರುತ್ತದೆ. ಕಾಣೆಯಾದ ಹುಡುಗನ ಚಹರೆ: ಕುಮಾರವೇಲು ಬಿನ್ ರವಿಚಂದ್ರನ್,
23 ವರ್ಷ, 5'6'' ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಕೋಲುಮುಖ, ಉದ್ದನೆಯ ಮೂಗು, ಕಪ್ಪು ಕೂದಲು, ತಮಿಳು ಭಾಷೆ ಮಾತನಾಡುತ್ತಾನೆ. ಕಿತ್ತಳೆ
ಬಣ್ಣದ ಶರ್ಟ್, ಸಿಮೆಂಟ್ ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ.
ಕಾಣೆಯಾದ ಹುಡುಗನ ಬಗ್ಗೆ ಸುಳಿವು ಸಿಕ್ಕಲ್ಲಿ ಚನ್ನರಾಯಪಟ್ಟಣ ನಗರ ಠಾಣೆ ಫೋನ್ ನಂ. 08176-252333 ಕ್ಕೆ ಸಂಪರ್ಕಿಸುವುದು.
ಹೆಂಗಸು ಕಾಣೆ
ದಿನಾಂಕ: 30-11-2017 ರಂದು ಬೆಳಿಗ್ಗೆ 09-00 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು,
ನುಗ್ಗೇಹಳ್ಳಿ ಹೋಬಳಿ, ವಳಗೆರ ಸೋಮನಹಳ್ಳಿ ಗ್ರಾಮದ ಮಂಜೇಗೌಡ ರವರ ಹೆಂಡತಿ ಗೀತಾ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಮನೆಯಿಂದ ಹೊರಗಡೆ
ಹೋದವಳು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಿದರೂ
ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ಗೀತಾ ರವರ ಪತಿ ಶ್ರೀ ಮಂಜೇಗೌಡ ರವರು ದಿನಾಂಕ:
02-12-2017 ರಂದು ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ
ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಹೆಂಗಸಿನ ಚಹರೆ: ಗೀತಾ ಕೋಂ ಮಂಜೇಗೌಡ,
22 ವರ್ಷ, 5' ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಕನ್ನಡ ಭಾಷೆ ಮಾತನಾಡುತ್ತಾಳೆ. ಕಾಣೆಯಾದ
ಹೆಂಗಸಿನ ಬಗ್ಗೆ ಸುಳಿವು ಸಿಕ್ಕಲ್ಲಿ ಚನ್ನರಾಯಪಟ್ಟಣ ನಗರ ಠಾಣೆ ಫೋನ್ ನಂ. 08176-252333 ಕ್ಕೆ ಸಂಪರ್ಕಿಸುವುದು.
No comments:
Post a Comment