* * * * * * HASSAN DISTRICT POLICE

Saturday, November 18, 2017

PRESS NOTE : 18-11-2017

ಪತ್ರಿಕಾ ಪ್ರಕಟಣೆ            ದಿನಾಂಕ: 18-11-2017.

ಅಕ್ರಮವಾಗಿ ಮರಳು ತುಂಬುತ್ತಿದ್ದ 4 ಜನರ ಬಂಧನ, ಮರಳು ಸಮೇತ ಮಹೇಂದ್ರ ಪಿಕ್ಅಪ್ ವಾಹನ ವಶ:



        ದಿನಾಂಕ: 17-11-2017 ರಂದು ಬೆಳಿಗ್ಗೆ 8-30 ಗಂಟೆ ಸಮಯದಲ್ಲಿ ಆಲೂರು ತಾಲ್ಲೂಕು, ಕೆ. ಹೊಸಕೋಟೆ ಹೋಬಳಿ, ಕಿತ್ತಗಳಲೆ ಗ್ರಾಮದ ಹತ್ತಿರ ಹರಿಯುತ್ತಿರುವ ಹೇಮಾವತಿ ಹೊಳೆಯ ಹಿನ್ನಿರಿನಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದಾರೆಂದು ಶ್ರೀ ಇ.ವಿ. ವಿನಯ್, ಪಿಐ ಆಲೂರು ಪೊಲೀಸ್ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ನೋಡಲಾಗಿ ಕೆಎ-21 ಬಿ 4461 ರ ಮಹೇಂದ್ರ ಪಿಕ್ಆಪ್ ವಾಹನಕ್ಕೆ ಮರಳು ಸಾಗಿಸುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ಚಂದನ ಬಿನ್ ನಾಗೇಶ್, 24 ವರ್ಷ, 2) ಕುಮಾರ ಬಿನ್ ರಾಜಯ್ಯ, 22 ವರ್ಷ 3) ಚೇತನ@ಚೇತನ್ಕುಮಾರ್ ಬಿನ್ ನಾಗೇಶ್, 23 ವರ್ಷ, ಮೂವರು ಹೇರಗಳಲೆ ಗ್ರಾಮ, ಕೆ.ಹೊಸಕೋಟೆ ಹೋಬಳಿ, ಆಲೂರು ತಾಲ್ಲೂಕು 4) ಮಿಥನ ಬಿನ್ ಲೇಟ್ ಪ್ರಸನ್ನ, 19 ವರ್ಷ, ಮಲ್ಲಾಪುರ ಗ್ರಾಮ, ಕೆ. ಹೊಸಕೋಟೆ ಹೋಬಳಿ, ಆಲೂರು ತಾಲ್ಲೂಕು ಎಂದು ತಿಳಿಸಿದ್ದವರನ್ನು ದಸ್ತಗಿರಿ ಮಾಡಿಕೊಂಡು ಮರಳು ಸಮೇತ ಮಹೇಂದ್ರ ಪಿಕ್ಆಪ್ ವಾಹನವನ್ನು ಅಮಾನತ್ತುಪಡಿಸಿಕೊಂಡು ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.

No comments: