* * * * * * HASSAN DISTRICT POLICE

Wednesday, November 15, 2017

PRESS NOTE : 15-11-2017

         ಪತ್ರಿಕಾ ಪ್ರಕಟಣೆ            ದಿನಾಂಕ: 15-11-2017.
ಕಾರು ಆಪೇ ಗೂಡ್ಸ್ ಆಟೋ ರಿಕ್ಷಾಕ್ಕೆ ಡಿಕ್ಕಿ, ಗೂಡ್ಸ್ ವಾಹನದ ಚಾಲಕ ಸಾವು



            ದಿನಾಂಕ: 15-11-2017 ರಂದು ಬೆಳಗಿನ ಜಾವ 3-30 ಗಂಟೆ ಸಮಯದಲ್ಲಿ ಮಂಡ್ಯ ಜಿಲ್ಲೆ, ಕುಣಿಗಲ್ನ ಜನತಾ ಕಾಲೋನಿ ವಾಸಿ ಶ್ರೀ ಪ್ರದೀಪ, ರವರು ಸಂಬಂಧಿಕರಾದ ಚನ್ನರಾಯಪಟ್ಟಣ ತಾಲ್ಲೂಕು, ಹಿರೀಸಾವೆ ಗ್ರಾಮದ ವಾಸಿ ಶ್ರೀ ರಾಜು, ರವರ ಬಾಬ್ತು ಕೆಎ-06 ಡಿ-3841 ರ ಆಪೇ ಗೂಡ್ಸ್ ಆಟೋ ರಿಕ್ಷಾವನ್ನು ತೆಗೆದುಕೊಂಡು ತಮ್ಮ ಗ್ರಾಮಕ್ಕೆ ಹೋಗಲು ಚನ್ನರಾಯಪಟ್ಟಣ ತಾಲ್ಲೂಕು, ಹಿರೀಸಾವೆ ಟೌನ್, ಎನ್ಹೆಚ್-75 ಬಿ.ಎಂ. ರಸ್ತೆ, ಬ್ಯಾಡರಹಳ್ಳಿ ಗೇಟ್ ಹತ್ತಿರ ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಕೆಎ-42 ಎಂ-7665ರ ಇನ್ನೋವಾ ಕಾರಿನ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಆಪೇ ಗೂಡ್ಸ್ ಆಟೋ ರಿಕ್ಷಾದ ಹಿಂಭಾಗಕ್ಕೆ ಡಿಕ್ಕಿ ಮಾಡಿದ ಪರಿಣಾಮ ಶ್ರೀ ಪ್ರದೀಪ ಬಿನ್ ಲೇಟ್ ನಾರಾಯಣ, 23 ವರ್ಷ, ಕುಣಿಗಲ್ನ ಜನತಾ ಕಾಲೋನಿ, ಮಂಡ್ಯ ಜಿಲ್ಲೆ, ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆಂದು ಮೃತರ ಸಂಬಂಧಿಕರಾದ ಶ್ರೀ ರಾಜು, ರವರು ಕೊಟ್ಟ ದೂರಿನ ಮೇರೆಗೆ ಹಿರೀಸಾವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

No comments: