ಪತ್ರಿಕಾ ಪ್ರಕಟಣೆ ದಿನಾಂಕ: 14-11-2017.
ಜೂಜಾಡುತ್ತಿದ್ದ 4 ಜನರ ಬಂಧನ, ಬಂಧಿತರಿಂದ ಸುಮಾರು 2,950/- ನಗದು
ವಶ:
ದಿನಾಂಕ: 13-11-2017 ರಂದು ಬೆಳಿಗ್ಗೆ 11-00 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕು,
ಹಳೇಬೀಡು ಹೋಬಳಿ, ದೊಡ್ಡಕೋಡಿಹಳ್ಳಿ ಗ್ರಾಮದ ಸಮೀಪವಿರುವ ಸೂರನಾಯಕನಹಳ್ಳಿ ಬಸ್ ನಿಲ್ದಾಣದ ಹತ್ತಿರ
ಅಂದರ್-ಬಾಹರ್ ಜೂಜಾಟಾಡುತ್ತಿದ್ದಾರೆಂದು ಶ್ರೀ ರೇಣುಕಪ್ರಸಾದ್, ಪಿಎಸ್ಐ, ಹಳೇಬೀಡು ಪೊಲೀಸ್ ಠಾಣೆ ರವರಿಗೆ ಬಂದ ಖಚಿತ
ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಡುತ್ತಿದ್ದವರನ್ನು ಹಿಡಿದು ಹೆಸರು
ವಿಳಾಸ ಕೇಳಲಾಗಿ ರಾಜಣ್ಣ ಬಿನ್ ಶಾಂತಯ್ಯ, 48 ವರ್ಷ, ದೊಡ್ಡಕೋಡಿಹಳ್ಳಿ ಗ್ರಾಮ, ಹಳೇಬೀಡು ಹೋಬಳಿ,
ಬೇಲೂರು ತಾಲ್ಲೂಕು 2) ಧನಂಜಯಮೂತರ್ಿ ಬಿನ್ ರಂಗೇಗೌಡ, 41 ವರ್ಷ, ಕಬ್ಬಿಗರಹಳ್ಳಿ ಗ್ರಾಮ, ಹಳೇಬೀಡು ಹೋಬಳಿ, ಬೇಲೂರು ತಾಲ್ಲೂಕು 3) ಹರಳೇಗೌಡ ಬಿನ್ ಹಲಗೇಗೌಡ, 68 ವರ್ಷ, ದೊಡ್ಡಕೋಡಿಹಳ್ಳಿ ಗ್ರಾಮ, ಹಳೇಬೀಡು ಹೋಬಳಿ, ಬೇಲೂರು ತಾಲ್ಲೂಕು 4) ತಿಮ್ಮನಾಯ್ಕ್ ಬಿನ್ ರಾಮನಾಯ್ಕ್, 70 ವಷ್, ದೊಡ್ಡಕೋಡಿಹಳ್ಳಿ ಗ್ರಾಮ, ಹಳೇಬೀಡು ಹೋಬಳಿ, ಬೇಲೂರು ತಾಲ್ಲೂಕು ಎಂದು ತಿಳಿಸಿದ್ದವರನ್ನು
ದಸ್ತಗಿರಿ ಮಾಡಿಕೊಂಡು ಜೂಜಾಟದಲ್ಲಿ ಪಣಕ್ಕಟ್ಟಿದ್ದ ಸುಮಾರು 2950/- ನಗದನ್ನು ಅಮಾನತ್ತುಪಡಿಸಿಕೊಂಡು ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ
ಕ್ರಮ ಕೈಗೊಂಡಿರುತ್ತೆ.
ಟ್ರ್ಯಾಕ್ಟರ್ ಮರಳು
ತುಂಬುತ್ತಿದ್ದ ಇಬ್ಬರ ಬಂಧನ, ಟ್ರ್ಯಾಕ್ಟರ್ ಸಮೇತ ಮರಳು ವಶ:
ದಿನಾಂಕ: 13-11-2017 ರಂದು ಬೆಳಿಗ್ಗೆ 9-00 ಗಂಟೆ ಸಮಯದಲ್ಲಿ ಆಲೂರು ತಾಲ್ಲೂಕು, ಕೆ.
ಹೊಸಕೋಟಿ ಹೋಬಳಿ, ಶಿರಗಾವರ ಗ್ರಾಮದ ಹತ್ತಿರ ಹರಿಯುತ್ತಿರುವ ಹೇಮಾವತಿ ಹೊಳೆಯ
ಹಿನ್ನೀರಿನಲ್ಲಿ ಕೆಎ-13 ಟಿ 7052, ಕೆಎ-46-ಟಿ-3462 ರ ಟ್ರ್ಯಾಕ್ಟರ್ಗೆ ಮರಳು ತುಂಬುತ್ತಿದ್ದಾರೆಂದು ಶ್ರೀ ಇ.ವಿ.
ವಿನಯ್, ಪಿಐ, ಆಲೂರು
ಪೊಲೀಸ್ ಠಾಣೆ, ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ
ಸ್ಥಳಕ್ಕೆ ಹೋಗಿ ನೋಡಲಾಗಿ ಯಾವುದೇ ಪರವಾನಗಿಲ್ಲದೆ ಅಕ್ರಮವಾಗಿ ಟ್ರ್ಯಾಕ್ಟರ್ಗೆ ಮರಳು
ತುಂಬುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ಬಸವರಾಜು ಬಿನ್ ಕೆಂಚೇಗೌಡ, 33 ವರ್ಷ, ಸಿರಗಾವರ
ಕೆ.ಹೊಸಕೋಟೆ ಹೋಬಳಿ, ಆಲೂರು ತಾಲ್ಲೂಕು 2) ರಘು@ರವಿ ಬಿನ್ ತಮ್ಮೇಗೌಡ, 33 ವರ್ಷ, ಕಡುವಿನ
ಕೋಟೆ ಹೋಬಳಿ, ಹೊಳೆನರಸೀಪುರ ತಾಲ್ಲೂಕು ಎಂದು ತಿಳಿಸಿದ್ದವರನ್ನು ದಸ್ತಗಿರಿ
ಮಾಡಿಕೊಂಡು ಟ್ರ್ಯಾಕ್ಟರ್ ಸಮೇತ ಮರಳನ್ನು ಅಮಾನತ್ತುಪಡಿಸಿಕೊಂಡು ಆಲೂರು ಪೊಲೀಸ್ ಠಾಣೆಯಲ್ಲಿ
ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.
No comments:
Post a Comment