* * * * * * HASSAN DISTRICT POLICE

Thursday, September 21, 2017

PRESS NOTE : 21-09-2017

ಪತ್ರಿಕಾ ಪ್ರಕಟಣೆ             ದಿನಾಂಕ: 21-09-2017

ಗಂಡಸು ಕಾಣೆ
 ಈಗ್ಗೆ 5 ತಿಂಗಳಿನಿಂದ ಹಾಸನ ತಾಲ್ಲೂಕು, ದುದ್ದ ಹೋಬಳಿ, ಅನುಗವಳ್ಳಿ ಗ್ರಾಮದ ವಾಸಿ ಶ್ರೀ ಶಿವಸ್ವಾಮಿ, ರವರು ಪತ್ನಿ ಶ್ರೀಮತಿ ಲಲಿತ,ರವರಿಗೆ ಹಾಸನಕ್ಕೆ ಹೋಗಿ ಬರುವುದಾಗಿ ಮನೆಯಲ್ಲಿ ಹೇಳಿ ಹೋದವರು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶ್ರೀ ಶಿವಸ್ವಾಮಿಯ ಪತ್ನಿ ಶ್ರೀಮತಿ ಲಲಿತಾ, ರವರು ದಿನಾಂಕ: 20-09-2017 ರಂದು ಕೊಟ್ಟ ದೂರಿನ ಮೇರೆಗೆ ದುದ್ದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಗಂಡಸಿನ ಚಹರೆ: ಶ್ರೀ ಶಿವಸ್ವಾಮಿ, 35 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾರೆ, ಈ ವ್ಯಕ್ತಿಯ ಸುಳಿವು ಸಿಕ್ಕಲ್ಲಿ 08172-223935 ಕ್ಕೆ ಸಂಪರ್ಕಿಸುವುದು.
ಹುಡುಗಿ ಕಾಣೆ
   ದಿನಾಂಕ: 19-09-2017 ರಂದು ಮಧ್ಯಾಹ್ನ 3-30 ಗಂಟೆ ಸಮಯದಲ್ಲಿ ಅರಕಲಗೂಡು ಪಟ್ಟಣದ ಕುಂಬಾರರ ಬೀದಿ ವಾಸಿ ಶ್ರೀ ಸೈಯಾದ್ ಅಸಾವುಲ್ಲಾ, ರವರ ಮಗಳು ಕು|| ಸುನೇನ ಗುಲ್ಬಾನ್, ನೆಂಟರ ಮನೆಗೆ ಹೋಗಿ ಬರುತ್ತೇನೆಂದು ಮನೆಯಲ್ಲಿ ಹೇಳಿ ಹೋದವಳು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಪತ್ತೆಮಾಡಿಕೊಡಬೇಕೆಂದು ಕು|| ಸುನೇನ ಗುಲ್ಬಾನ್ಳ ತಂದೆ ಶ್ರೀ ಸೈಯಾದ್ ಅಸಾವುಲ್ಲಾ, ರವರು ದಿನಾಂಕ: 21-09-2017 ರಂದು ಕೊಟ್ಟ ದೂರಿನ ಮೇರೆಗೆ ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ., ಕಾಣೆಯಾದ ಹುಡುಗಿಯ ಚಹರೆ: ಕು|| ಸುನೇನ ಗುಲ್ಬಾನ್ ಬಿನ್ ಸೈಯಾದ ಅಸಾವುಲ್ಲಾ, 19 ವರ್ಷ, 5'5 ಅಡಿ ಎತ್ತರ, ಕೆಂಪುಬಣ್ಣ, ಸಾಧಾರಣಾ ಮೈಕುಟ್ಟು, ಕನ್ನಡ ಮತ್ತು ಉರ್ದು ಭಾಷೆ ಮಾತನಾಡುತ್ತಾಳೆ.

No comments: