ಪತ್ರಿಕಾ
ಪ್ರಕಟಣೆ ದಿನಾಂಕ: 16-09-2017
ಜೂಜಾಡುತ್ತಿದ್ದ
ನಾಲ್ವರ ಬಂಧನ, ಬಂಧಿತರಿಂದ ಸುಮಾರು1,340/- ನಗದು ವಶ:
ದಿನಾಂಕ: 15-09-2017 ರಂದು ಮಧ್ಯಾಹ್ನ 1-30 ಗಂಟೆ ಸಮಯದಲ್ಲಿ ಶ್ರೀ ಪಿ. ಸುರೇಶ್, ಹಾಸನ ನಗರ ಠಾಣೆ ರವರು ಸಿಬ್ಬಂದಿಗಳೊಂದಿಗೆ ತಣ್ಣೀರುಹಳ್ಳದ ಕಡೆ ರೌಂಡ್ಸ್ ಕರ್ತವ್ಯ ನಿರ್ವಹಿಸುತ್ತಿದ್ದಾಗ ಹಾಸನದ ಗೊರೂರು ರಸ್ತೆ, ಕ್ಯಾಂಟರ್ ಸ್ಟ್ಯಾಂಡ್ ಹತ್ತಿರ ಅಂದರ್-ಬಾಹರ್
ಜೂಜಾಟಾಡುತ್ತಿದ್ದಾರೆಂದು ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ
ಜೂಜಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ಸುರೇಶ್ ಬಿನ್ ಗೋವಿಂದೇಗೌಡ, ಹಳೇ ಪೋಸ್ಟ್ ಆಫೀಸ್ ರಸ್ತೆ, ಹಾಸನ 2) ಮಂಜುನಾಥ ಬಿನ್ ಲೇಟ್ ರಂಗೇಗೌಡ, ಹೊನ್ನಾವರ ಗ್ರಾಮ, ಹಾಸನ ತಾಲ್ಲೂಕು, 3) ಉಮೇಶ್ ಬಿನ್ ಲೇಟ್ ಗೋವಿಂದೇಗೌಡ, ಹೇಮಾವತಿನಗರ ಹಾಸನ 4) ಮಂಜೇಗೌಡ ಬಿನ್ ಲೇಟ್ ದೇವೇಗೌಡ, ಬಿ. ಕಾಟೀಹಳ್ಳಿಕೊಪ್ಪಲು, ಹಾಸನ ಎಂದು ತಿಳಿಸಿದ್ದವರನ್ನು ದಸ್ತಗಿರಿ ಮಾಡಿಕೊಂಡು
ಜೂಜಾಟಾದಲ್ಲಿ ಪಣಕ್ಕಿಟ್ಟಿದ್ದ ಸುಮಾರು 1,340/- ನಗದನ್ನು ಅಮಾನತ್ತುಪಡಿಸಿಕೊಂಡು ಹಾಸನ ನಗರ ಠಾಣೆಯಲ್ಲಿ ಪ್ರಕರಣ
ದಾಖಲಿಸಿ ಕ್ರಮ ಕೈಗೊಂಡಿರುತ್ತೆ.
No comments:
Post a Comment