ಪತ್ರಿಕಾ ಪ್ರಕಟಣೆ
ದಿನಾಂಕ: 15-09-2017
ಜೂಜಾಡುತ್ತಿದ್ದ ಆರು ಜನರ ಬಂಧನ, ಬಂಧಿತರಿಂದ ಸುಮಾರು 2,110/- ನಗದು
ವಶ:
ದಿನಾಂಕ: 14-09-2017 ರಂದು ಬೆಳಿಗ್ಗೆ 8-00 ಗಂಟೆ ಸಮಯದಲ್ಲಿ ಆಲೂರು ತಾಲ್ಲೂಕು, ಕೆ.ಹೆಚ್. ಕೋಟೆ ಹೋಬಳಿ, ಬೋಸ್ಮಾನಹಳ್ಳಿ ಗ್ರಾಮದ ವಾಸಿ ಶ್ರೀ
ಕುಳ್ಳಯ್ಯ, ರವರ ಜಮೀನಿನಲ್ಲಿರುವ ಮರದ ಕೆಳಗೆ
ಅಂದರ್-ಬಾಹರ್ ಜೂಜಾಟಾಡುತ್ತಿದ್ದಾರೆಂದು ಶ್ರೀ ಇ.ವಿ. ವಿನಯ್, ಪಿಐ, ಆಲೂರು ಪೊಲೀಸ್ ಠಾಣೆ ರವರಿಗೆ ಬಂದ ಖಚಿತ
ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಡುತ್ತಿದ್ದವರನ್ನು ಹಿಡಿದು ಹೆಸರು
ವಿಳಾಸ ಕೇಳಲಾಗಿ 1) ವಿಶ್ವನಾಥ ಬಿನ್ ವಿಶ್ವನಾಥ, 38 ವರ್ಷ, 2) ರಾಮ ಬಿನ್ ಪುಟ್ಟಸ್ವಾಮಿಗೌಡ, 24 ವರ್ಷ,
3) ಯೋಗೇಶ್ ಬಿನ್ ಜವರೇಗೌಡ, 36 ವರ್ಷ, 4) ಚನ್ನಕೇಶವ ಬಿನ್ ತಿಮ್ಮೇಗೌಡ, 28 ವರ್ಷ, 5) ಗಣೇಶ್ ಬಿನ್ ವೇಲುಗೌಡ, 48 ವರ್ಷ, 6) ಯೋಗೇಶ್ ಬಿನ್ ತಿಮ್ಮೇಗೌಡ, 44 ವರ್ಷ, ಎಲ್ಲರೂ ಬೋಸ್ಮಾನಹಳ್ಳಿ ಗ್ರಾಮ, ಕೆ. ಹೊಸಕೋಟೆ
ಹೋಬಳಿ, ಆಲೂರು ಎಂದು ತಿಳಿಸಿದ್ದವರನ್ನು ದಸ್ತಗಿರಿ ಮಾಡಿಕೊಂಡು
ಜೂಜಾಟಾದಲ್ಲಿ ಪಣಕ್ಕಿಟ್ಟಿದ್ದ ಸುಮಾರು 2,110/- ನಗದನ್ನು
ಅಮಾನತ್ತುಪಡಿಸಿಕೊಂಡು ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.
ಲಾರಿಯ ನಿಯಂತ್ರಣ ತಪ್ಪಿ ಲಾರಿ
ಚಾಲಕ ಸಾವು
ದಿನಾಂಕ: 14-09-2017 ರಂದು ಚನ್ನರಾಯಪಟ್ಟಣ ಗಾಂಧಿ ವೃತ್ತ (ಸ್ವಂತ ವಿಳಾಸ: ಹಾಸನ ತಾಲ್ಲೂಕು,
ಶಾಂತಿಗ್ರಾಮ ಹೋಬಳಿ, ಚಿಕ್ಕಾಲದಹಳ್ಳಿ ಗ್ರಾಮ)ದ ವಾಸಿ
ಶ್ರೀ ಮೋಹನ್ಕುಮಾರ್, ರವರ ಬಾಬ್ತು ಕೆಎ-18-5497 ರ 407 ರ ಮಿನಿಲಾರಿಗೆ ಬೆಲ್ಲ ಲೋಡ್ ಮಾಡಿಕೊಂಡು
ಭದ್ರವತಿಗೆ ತೆಗೆದುಕೊಂಡು ಹೋಗಿ ವಾಪಸ್ ದಿನಾಂಕ: 15-09-2017 ರಂದು ಬೆಳಿಗ್ಗೆ 5-30 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕು
ಹುಲ್ಲೇನಹಳ್ಳಿ ಹತ್ತಿರ ಅರಸೀಕೆರೆ-ಚನ್ನರಾಯಪಟ್ಟಣ ರಸ್ತೆಯಲ್ಲಿ ಹೋಗುತ್ತಿದ್ದಾಗ ತನ್ನ
ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ರಸ್ತೆಗೆ ಎಡ ಮಗ್ಗಲಾಗಿ ಪಲ್ಟಿಯಾದ ಪರಿಣಾಮ
ಶ್ರೀ ಮೋಹನ್ಕುಮಾರ್ ಬಿನ್ ದೊಡ್ಡೇಗೌಡ, 43 ವರ್ಷ, ಚಿಕ್ಕಾಲದಹಳ್ಳಿ ಗ್ರಾಮ, ಶಾಂತಿಗ್ರಾಮ ಹೋಬಳಿ, ಹಾಸನ ತಾಲ್ಲೂಕು ರವರಿಗೆ ತೀವ್ರ ಸ್ವರೂಪದ ರಕ್ತಗಾಯಳಾಗಿ ಸ್ಥಳದಲ್ಲೇ
ಮೃತಪಟ್ಟಿರುತ್ತಾರೆ. ಮೃತರ ಅಣ್ಣ ಶ್ರೀ ಗುಂಡೇಗೌಡ, ರವರು ಕೊಟ್ಟ ದೂರಿನ ಮೇರೆಗೆ ಅರಸೀಕೆರೆ
ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
No comments:
Post a Comment